ಪ್ರತಿನಿಧಿ ವರದಿ ಕೆ.ಆರ್.ಪುರ
ಶುದ್ಧ ಜೇಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪನ ಪೂಜೆ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ-ಪರಿಸರ ಅಧಿಕಾರಿ ಶ್ರೀಮತಿ ವೀಣಾ ತಿಳಿಸಿದರು.
ಕ್ಷೇತ್ರದ ಭಾರತೀಯ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಿಡಿತ ಫೌಂಡೇಶನ್ ಆಶ್ರಯದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಹಮ್ಮಿಕೊಂಡಿದ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಜಾಗೃತಿರಾಗಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗಿ, ನಮ್ಮ ಸುತ್ತಮುತ್ತಲಿನ ಸ್ನೇಹಿತರಿಗೆ ಅರಿವು ಮೂಡಿಸಿಬೇಕು ಎಂದು ಮಿಡಿತ ಸಂಸ್ಥೆಯ ಅಧ್ಯಕ್ಷ ಪರಿಸರ ಮಂಜು ಮನವಿ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಕುಮಾರ್, ಉಪನ್ಯಾಸಕಿ ಶಶಿಕಲಾ, ಶಿಕ್ಷಕ ವಿಜಯ್ ಕುಮಾರ್, ಶೋಭ, ಮಂಡಳಿಯ ಕ್ಷೇತ್ರ ಸಹಾಯ ಆತ್ಮಾನಂದ, ಮಿಡಿತ ಸಂಸ್ಥೆಯ ಪ್ರ.ಕಾರ್ಯದರ್ಶಿ ಸೌಮ್ಯ ಪವಾರ್, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.