ಮೈಸೂರು: ಅರಮನೆ ನಗರಿಯ ಹೃದಯ ಭಾಗದಲ್ಲಿಂದು ಇದ್ದಕ್ಕಿದ್ದಂತೆಯೇ ಮರದ ಕೊಂಬೆಯೊಂದು ನೆಲಕ್ಕುರುಳಿದೆ. ಮುರಿದು ಬಿದ್ದ ಮರದ ಕೊಂಬೆ ಅಲ್ಲೇ ನಿಂತಿದ್ದ ಕಾರ್ ಒಂದರ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ.
ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಘಟನೆ ಜರುಗಿದ್ದು, ಕಾರಿನ ಮೇಲೆ ಬಿದ್ದ ಮರದ ಕೊಂಬೆ, ಕಾರಿನ ಮುಂಭಾಗವನ್ನು ಜಖಂ ಮಾಡಿದೆ. ವಾಹನ ಸವಾರರ ಮೇಲೂ ಮರದ ಕೊಂಬೆ ಬಿದ್ದಿದ್ದು, ಸದ್ಯ ಯಾವುದೇ ಪ್ರಾಣ ಹಾನಿಯಾಗಿಲ್ಲ. ತಕ್ಷಣ ಸಹಾಯಕ್ಕೆ ಧಾವಿಸಿದ ದಿವಂಗತ ಜಗ್ಗೀಗೌಡ ಯುವಕರ ಬಳಗದ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ತಾವೇ ಖುದ್ದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕೊಂಬೆ ಸರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.