ಮೈಸೂರಿನ ಜನಯನಗರದ ಚಿಕ್ಕಹರದನಹಳ್ಳಿಯಲ್ಲಿ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಅಡಗಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದ ಡಿಕ್ಕಿಯೊಳಗೆ ನಾಗರಹಾವು ಅಡಗಿ ಕುಳಿತಿತ್ತು. ಹೆಲ್ಮೆಟ್ ತೆಗೆದುಕೊಳ್ಳಲು ಹೋದಾಗ ಹಾವು ಕಾಣಿಸಿದ್ದು, ವಾಹನ ಮಾಲೀಕರು ಗಾಬರಿಯಾಗಿದ್ದಾರೆ.
ಕೂಡಲೇ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ವಾಹನ ಮಾಲೀಕರು ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸ್ನೇಕ್ ರಮೇಶ್ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.
ನಂತರ ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡುಗಡೆ ಮಾಡಿದ್ದಾರೆ.