ಪ್ರತಿನಿಧಿ ವರದಿ ನಾಗಮಂಗಲ
ತಾಲೂಕಿನ ಬಿ.ಜಿ.ನಗರದಲ್ಲಿರುವ ಶ್ರೀ ಭಕ್ತನಾಥ ಸ್ವಾಮಿ ವಿದ್ಯಾ ಸಂಸ್ಥೆಯಲ್ಲಿ ಸರಳವಾಗಿ ಹಾಗೂ ಸುಂದರವಾಗಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನಿರೂಪಣೆ, ಸ್ವಾಗತ ಭಾಷಣ, ಸಮೂಹ ಗೀತೆ, ರಾಧಾಕೃಷ್ಣನ್ ಅವರ ಬಗ್ಗೆ ಭಾಷಣ, ನೃತ್ಯ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಪ್ರಾಂಶುಪಾಲ ಬಿ.ಎನ್.ಮಂಜೇಗೌಡ ಅವರು ರಾಧಾಕೃಷ್ಣನ್ ಅವರ ಜೀವನ ಚರಿತ್ರೆ ಕೊಟ್ಟಂತಹ ಶೈಕ್ಷಣಿಕ ಕೊಡುಗೆ ಇನ್ನು ಹತ್ತು ಹಲವು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮೇಲ್ವಿಚಾರಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.