ಪ್ರತಿನಿಧಿ ವರದಿ ಕಡೂರು
ದುಡಿಯುವ ವರ್ಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮನಸ್ಸು ನಮ್ಮೆಲ್ಲರದ್ದಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಗುರುವಾರ 20ಲಕ್ಷ ರೂ. ವೆಚ್ಚದ ಟ್ಯಾಕ್ಸಿ ಸ್ಟಾಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕರೊಡಗೂಡಿ ಶ್ರಮಿಸುತ್ತೇವೆ. ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬಸ್ ತಂಗುದಾಣದ ಅವಶ್ಯಕತೆಯಿದೆ. ಆದರೆ, ಅಲ್ಲಿ ಜಾಗದ ಕೊರತೆಯಿದ್ದು, ಶೀಘ್ರದಲ್ಲೆ ಅದನ್ನು ಬಗೆಹರಿಸಲಾಗುತ್ತದೆ. ಕಡೂರು ಪಟ್ಟಣ ಸವ್ಯವಸ್ಥಿತವಾದ ಪಟ್ಟಣವಾಗಬೇಕೆಂಬ ಆಶಯ ನಮ್ಮದು ಎಂದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯ ಈರಳ್ಳಿ ರಮೇಶ್, ಯತಿರಾಜ್, ಯಾಸೀನ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ವಿನೋದ್, ಶ್ರೀನಿವಾಸ್, ಎಚ್.ಸಿ.ಮಂಜುನಾಥ್, ಬಷೀರ್ ಸಾಬ್, ಪಂಗ್ಲಿ ಮಂಜುನಾಥ್, ಗಂಗರಾಜು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಉಮೇಶ್ ಉಪಸ್ಥಿತರಿದ್ದರು.
————————————
ಕೋಟ್
ದುಡಿಯುವ ಶ್ರಮಿಕ ವರ್ಗಕ್ಕೆ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ಕಡೂರು ಪಟ್ಟಣದಲ್ಲಿ ಆಟೋ, ಟ್ಯಾಕ್ಸಿಗಳು ನಿಲ್ಲಲು ಸುಸಜ್ಜಿತ ನಿಲ್ದಾಣಗಳ ನಿರ್ಮಾಣವಾಗಬೇಕೆಂಬ ಆಶಯದಿಂದ ಪಟ್ಟಣದಲ್ಲಿ ಹಲವಾರು ಕಡೆ ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬಹು ವರ್ಷಗಳ ನಿರೀಕ್ಷೆ ಸಾಕಾರವಾಗಿದೆ.
ಕೆ.ಎಸ್.ಆನಂದ್, ಶಾಸಕ