ನಂಜನಗೂಡು: ನಗರಸಭೆಗೆ ಅಧ್ಯಕ್ಷ ರಾಗಿ ಆಯ್ಕೆಯಾದ ಶ್ರೀಕಂಠು ಅವರನ್ನು ಸಂಯೋಜಕರಾದ ಎನ್. ಭಾಸ್ಕರ್ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಅಕ್ಬರ್ ಅಲೀಮ್, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಹೆಡತಲೆ ಮಂಜುನಾಥ್ ಅಂಬೇಡ್ಕರ್ ಅಭಿರುದ್ಧಿ ನಿಗಮದ ಮಾಜಿ ನಿರ್ದೇಶಕರಾದ ವಿಜಯಕುಮಾರ್, ಮಲ್ಲೇಶ್ ಬೆಳವಾಡಿ, ಕಾಂಗ್ರೆಸ್ ಮುಖಂಡರಾದ ವಿ.ಸಿ. ಶ್ರೀನಿವಾಸ ಮೂರ್ತಿ, ಡಿ. ಎಂ. ರಾಜು, ದಾಸ್ ಮತ್ತಿತರರು ಹಾಜರಿದ್ದರು.