ಪ್ರತಿನಿಧಿ ವರದಿ ಯಳಂದೂರು
ಇತ್ತೀಚೆಗೆ ನಿಧನರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಜಶೇಖರ್ ಅವರಿಗೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.
ನಿವೃತ್ತ ದೈಹಿಕ ಶಿಕ್ಷಕರಾದ ರಾಜಶೇಖರ್ ಅವರು ತಾಲೂಕಿನ ಹೊನ್ನೂರು ಗ್ರಾಮದ ಭೀಮರಾವ್ ರಾಮ್ ಜಿ ಪ್ರೌಢಶಾಲೆಯ ಸೆ.6 ರಂದು ನಿಧನರಾಗಿದ್ದು, 1992 ರಿಂದ 2022ರ ವರೆಗೂ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮೂಲತಃ ಕೆಬ್ಬೆಹುಂಡಿ ಗ್ರಾಮವಾದರೂ ಈ ಶಾಲೆಗೆ ಉತ್ತಮ ಸೇವೆ ನೀಡಿದ್ದರು.
ವಿದ್ಯಾರ್ಥಿಗಳಿಗೆ ಕ್ರೀಡೆಯ ಸಮಯದಲ್ಲಿ ಸ್ಪೂರ್ತಿದಾಯಕ ಮಾತುಗಳನ್ನಾಡಿ ಪರಿಣಾಮಕಾರಿ ಬೋಧನೆ ಮಾಡಿ ಮಕ್ಕಳ ಹೃದಯವನ್ನೇ ಗೆದ್ದಿದ್ದರು. ಇವರು ಆದರ್ಶ ಶಿಕ್ಷಕ ಎಂಬುವುದರಲ್ಲಿ ಸಂದೇಶ ಇಲ್ಲ ಎಂದು ಗ್ರಾಮಸ್ಥರು ಸ್ಮರಿಸಿದರು.