ಕಡ್ಡಾಯ
ಮೈಸೂರು:
ನಗರದ ಸಿಗ್ಮಾ ನರ್ಸಿಂಗ್ ಕಾಲೇಜು ಹಾಗೂ ವಿಶ್ವಶಾಂತಿ ಸಂಸ್ಥೆ ಸಹಯೋಗದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಹೊಸವರ್ಷದ ಆಚರಣೆಯ ಪ್ರಯುಕ್ತ ಕೇರಳದಲ್ಲಿ ಆಚರಿಸಲಾಗುವ ಓಣಂ ಹಬ್ಬದ ಆಚರಣೆ ಮಾಡಲಿದ್ದು, ಹಬ್ಬದ ಅಂಗವಾಗಿ ನಡೆಸಲಾದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಸಿಗ್ಮಾ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಎಸ್. ಜ್ಞಾನಶಂಕರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಗ್ಮಾ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಡಾ. ಕೆ.ಎಂ. ಮಾದಪ್ಪ, ವಿಶ್ವಶಾಂತಿ ಸಂಸ್ಥೆಯ ಕಾರ್ಯದರ್ಶಿ ಮಹಾಲಿಂಗಪ್ಪ, ಸಿಗ್ಮಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಇದ್ದರು.