ಮೈಸೂರು: ಕಾರಿನಲ್ಲಿ ಬಂದ ಖದೀಮರು ಸ್ಕೂಟರ್ನಲ್ಲಿ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಸಿದು ಪರಾರಿ ಆಗಿರುವ ಘಟನೆ ಮೈಸೂರು ತಾಲೂಕಿನ ಹುಯಿಲಾಳು ಗ್ರಾಮದ ರಸ್ತೆಯಲ್ಲಿ ನಡೆದಿದೆ. ಮೈದನಹಳ್ಳಿ ನಿವಾಸಿ ಕೃಷ್ಣ ಅವರ ಪತ್ನಿ ಶಶಿಚಿನ್ನದ ಕಳೆದುಕೊಂಡವರು. ಮಗನನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದಾಗ ಮಾರ್ಗಮಧ್ಯೆ ಮಗುವನ್ನು ಸರಿಯಾಗಿ ಕೂರಿಸಿಕೊಳ್ಳಲು ಹುಯಿಲಾಳು ಗ್ರಾಮದ ಸಮೀಪ ಸ್ಕೂಟರ್ ನಿಲ್ಲಿಸಿದ್ದಾರೆ. ಈ ವೇಳೆ ಅವರ ಬಳಿಗೆ ಬಂದ ಸರಗಳ್ಳರು ಶಶಿ ಅವರ 90 ಸಾವಿರ ರೂ. ಮೌಲ್ಯದ 18 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.