ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮತ್ತೊಬ್ಬ ಅಧಿಕಾರಿಯನ್ನ ಎತ್ತಂಗಡಿ ಮಾಡಲಾಗಿದೆ. ಮುಡಾದ ವಿಶೇಷ ಭೂಸ್ವಾಧೀನ ಅಧಿಕಾರಿ ಮಂಜುನಾಥ್ ವರ್ಗಾವಣೆ ಆಗಿದ್ದಾರೆ.
ಕಬಿನಿ ಜಲಾಶಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗ ಮಾಡಲಾಗಿದೆ.50-50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ಬೆಳಕಿಗೆ ಬಂದ ನಂತರ ವರ್ಗಾವಣೆ ಆಗುತ್ತಿರುವ ನಾಲ್ಕನೇ ಅಧಿಕಾರಿ ಮಂಜುನಾಥ್ ಆಗಿದ್ದಾರೆ. ಹಗರಣ ಬೆಳಕಿಗೆ ಬಂದ ಆರಂಭದಲ್ಲೇ ಆಯುಕ್ತ, ಕಾರ್ಯದರ್ಶಿ ಹಾಗೂ ಒಬ್ಬ ಇಂಜಿನಿಯರ್ ವರ್ಗಾವಣೆ ಆಗಿತ್ತು. ಇತ್ತೀಚೆಗಷ್ಟೇ ಮಾಜಿ ಆಯುಕ್ತ ದಿನೇಶ್ಕುಮಾರ್ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಅಮಾನತು ಬೆನ್ನಲ್ಲೇ ಮಂಜುನಾಥ್ ಎತ್ತಂಗಡಿ ಆಗಿದ್ದಾರೆ.