ಸಾಲ ವಾಪಸ್ ಕೇಳಿದ್ದಕ್ಕೆ ಹುಣಸೂರಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ.
ಸಾಲ ನೀಡಿದಾತನಿಗೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿದ್ದು , ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯ ಎಸ್ಎಂಹೆಚ್ ಬಾರ್ ಮುಂದೆ ಘಟನೆ ನಡೆದಿದೆ. ಬನ್ನಿಕುಪ್ಪೆಯ ಮೂಡಲಕೊಪ್ಪಲು ನಿವಾಸಿ ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿ ಆಗಿದ್ದಾರೆ. ಜಯಣ್ಣ, ಸುದೀಪ್, ಲೋಕೇಶ್ ಎಂಬುವರಿಂದ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದವರನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ನಾಗೇಶ್ರಿಂದ 25 ಸಾವಿರ ಹಣವನ್ನ ಜಯಣ್ಣ ಸಾಲಪಡೆದಿದ್ರು. 15 ಸಾವಿರ ಹಣ ವಾಪಸ್ಸು ಕೊಟ್ಟು 10 ಸಾವಿರ ಬಾಕಿ ಉಳಿಸಿಕೊಂಡಿದ್ದರು. ಬಾರ್ನ ಬಳಿ ಜಯಣ್ಣ ಸಿಕ್ಕಾಗ 10 ಸಾವಿರ ಹಣ ನೀಡುವಂತೆ ನಾಗೇಶ್ ಕೇಳಿದ್ದಾರೆ. ಈ ವೇಳೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ದೊಣ್ಣೆಯಿಂದ ನಾಗೇಶ್ ಮೇಲೆ ಹಲ್ಲೆ ಮಾಡಲಾಗಿದ್ದು,ಜಯಣ್ಣನ ಜೊತೆ ಆತನ ಸ್ನೇಹಿತರಾದ ಲೋಕೇಶ್, ಸುದೀಪ್ರಿಂದಿಲೂ ಹಲ್ಲೆ ಮಾಡಲಾಗಿದೆ. ಹಲ್ಲೆ ದೃಶ್ಯ ಬಾರ್ನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.