ಮಡಿಕೇರಿ : ನಾನಾ ಕಾರಣಗಳಿಂದ ಪತ್ರಿಕಾರಂಗದ ವಿಶ್ವಾಸರ್ಹತೆ ಕುಸಿಯುವ ಹಂತಕ್ಕೆ ಬಂದಿದ್ದು, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಆಜಿಸಿದ್ದ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಉದ್ಘಾಟಿಸಿ ಮಾತನಾಡಿದರು.
ಬಂಡವಾಳ ಶಾಹಿಗಳು ಮತ್ತು ಉದ್ಯಮಿಗಳ ಹಿಡಿತದಲ್ಲಿರುವ ಹೆಚ್ಚಿನ ಮುದ್ರಣ ಮತ್ತು ದೃಶ್ಯ ಮಾದ್ಯಮಗಳು ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರುವ ಪ್ರಯತ್ನಗಳನ್ನು ಮಾಡುತ್ತಿದೆ. ಪತ್ರಿಕಾರಂಗದ ಪಾತ್ರ ಮತ್ತು ಜವಾಬ್ದಾರಿ ತುಂಬಾ ದೊಡ್ಡದಿದೆ ಎಂದು ಎಂದರು.
ಸುಂಟಿಕೊಪ್ಪ 1 ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮರುಳೀಧರ್ ಮತ್ತು ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯ ಕೆ.ಆರ್.ನಿತ್ಯಾನಂದ್ ಮಾತನಾಡಿದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಎಂ.ಭೂತನಕಾಡು ಅಧ್ಯಕ್ಷತೆಯಲ್ಲಿ ನಡೆಯಿತು.
ಅರಶಿನಗುಪ್ಪೆ ಗ್ರಾಮದ ಬೆಣ್ಣೆ ಹಣ್ಣು ಶುಂಠಿ ಬೆಳೆಗಾರ ಎಂ.ಟಿ.ಬೇಬಿ, ಹೈನುಗಾರಿಕೆಯಲ್ಲಿ ಗುಡ್ಡೆಹೊಸೂರಿನ ಸಾಗರ್, ಸಮಗ್ರ ಕೃಷಿ ಸಾಧಕ ನಾಕೂರು ಶಿರಂಗಾಲದ ಪಿ.ಎಂ.ಬಿಜು, ಗುಡ್ಡೆಹೊಸೂರಿನ ನಿವಾಸಿ ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆ ವಸಂತಿ ಪೊನ್ನಪ್ಪ, ಅತ್ತೂರು ಗ್ರಾಮ ಯುವ ಕೃಷಿಕ ಎಂ.ಸಜಿತ್ ಅವರುಗಳಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಫಿ ಬೆಳೆಗಾರ ಟಿ.ಕೆ. ಸಾಯಿ ಕುಮಾರ್ ಅತ್ಯುತ್ತಮ ಅವಿಭಕ್ತ ಕುಟುಂಬಗಳಿಗೆ ಗೌರವಿಸಲು ರೂ 25000 ದತ್ತಿ ನಿಧಿ, ರೈತ ಮಹಿಳೆ ಕೊರವಂಡ ವಸಂತಿ ಪೊನ್ನಪ್ಪ 25 ಸಾವಿರ ಮೊತ್ತದ ದತ್ತಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.
ಫೋಟೋ 16 ಎಂಡಿಕೆ 04 ; ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.