ನಾಪೋಕ್ಲು: ಕೊಳಕೇರಿಯಲ್ಲಿ ಹೆಲ್ಪ್ ಲೈನ್ ಚಾರಿಟಿ ಟ್ರಸ್ಟ್ ವತಿಯಿಂದ ಬಡವರಿಗೆ ಉಪಯೋಗುವಂತೆ ಹೆಲ್ಪ್ ಲೈನ್ ಚಾರಿಟಿ ಟ್ರಸ್ಟ್ ಅಸ್ಥಿತ್ವಕ್ಕೆ ತರಲಾಗಿದ್ದು, ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.
ಚಾರಿಟಿ ಅಧ್ಯಕ್ಷರಾಗಿ ಎ. ಕೆ. ಹಾರಿಸ್, ಕಾರ್ಯದರ್ಶಿಯಾಗಿ ಕೆ.ವೈ ಅಶ್ರಫ್, ಕಮಿಟಿ ಸದಸ್ಯರಾಗಿ ಎ. ಎ. ಅಶ್ರಫ್, ಅಬ್ಬಾಸ್ ಸುಲೇಮಾನ್ ಅವರನ್ನು ಆಯ್ಕೆ ಮಾಡಲಾಯಿತು. ನಾಲ್ನಾಡಿಗೆ ಸೇರುವ ಬಡವರಿಗೆ ಮತ್ತು ರೋಗಿಗಳಿಗೆ ಪ್ರಯೋಜನವಾಗುವಂತೆ, ಕಡು ಬಡವರಿಗೆ ಉಚಿತವಾಗಿ ಸೇವೆ ನೀಡಲು ಯೋಜನೆ ರೂಪಿಸಲಾಯಿತು.
ನಾಪೋಕ್ಲು ಪೊಲೀಸ್ ಉಪ ನಿರೀಕ್ಷಕ ಮಂಜುನಾರ್ತ ವಾಹನ ಕೀ ಹಸ್ತಾಂತರದ ಮೂಲಕ ಚಾಲನೆ ನೀಡಿದರು.
ಕೊಳಕೇರಿ ಮುಸ್ಲೀಂ ಜಮಾಹತ್ ಅಧ್ಯಕ್ಷ ಎ. ಎ. ಅಶ್ರಫ್, ನಾಪೋಕ್ಲು ಗ್ರಾ. ಪಂ. ಮಾಜಿ ಅಧ್ಯಕ್ಷ ಕೆ. ಎ. ಇಸ್ಮಾಯಿಲ್ ಇದ್ದರು.
ಫೋಟೋ 16 ಎಂಡಿಕೆ 06 ; ಕೊಳಕೇರಿಯಲ್ಲಿ ಹೆಲ್ಪ್ ಲೈನ್ ಚಾರಿಟಿ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಸೇವೆ ಆರಂಭಿಸಲಾಯಿತು.