ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಾಳೇಟಿರ ಡಾ ಕಾವೇರಪ್ಪ ಅಭಿಪ್ರಾಯ
ಪ್ರತಿನಿಧಿ ವರದಿ ವಿರಾಜಪೇಟೆ
ಕನ್ನಡದ ವರ್ಣಮಾಲೆಯ ಅಕ್ಷರಗಳು ವ್ಶೆಜ್ಞಾನಿಕವಾಗಿದ್ದು ಉಚ್ಚಾರಣೆ, ಬರವಣಿಗೆ ಎಲ್ಲವನ್ನು ಸುಲಲಿತವಾಗಿ ಮಾಡಬಹುದಾಗಿರುವುದು ವಿಶಿಷ್ಠ. ಈ ರೀತಿ ಸುಲಲಿತವಾದ ಭಾಷೆಯನ್ನು ಬೇರೆ ಯಾವ ಭಾಷೆಯಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಗೋಣಿಕೊಪ್ಪದ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಾಳೇಟಿರ ಡಾ ಕಾವೇರಪ್ಪ ಅಭಿಪ್ರಾಯ ಪಟ್ಟರು.
ವಿರಾಜಪೇಟೆಯಲ್ಲಿ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕರ್ನಾಟಕದ ಅಭಿವೃದ್ದಿಯಲ್ಲಿ ಕೊಡಗಿನ ಪಾತ್ರ ಎಂಬ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಇಂದು ಸುವರ್ಣ ಸಂಭ್ರಮದಲ್ಲಿದೆ ಹಿಂದೆ ಹರಿದು ಹಂಚಿಹೋಗಿದ್ದ ರಾಜ್ಯದ ಭಾಗಗಳನ್ನು ಒಂದುಗೂಡಿಸಿ ಕರ್ನಾಟಕ ರಾಜ್ಯವಾಗಿಸಲಾಯಿತು. ಆದರೂ ಗಡಿ ರಾಜ್ಯದ ಜನರು ರಾಜ್ಯದ ಭಾಷೆಯನ್ನು ಬಲವಂತವಾಗಿ ಕಲಿಯುವ ಅನಿವರ್ಯತೆಯಲ್ಲಿದ್ದಾರೆ. ಏನೆ ಇದ್ದರು ರಾಜ್ಯವನ್ನು ಒಗ್ಗೂಡಿಸಲು ಅನೇಕ ಮಹನಿಯರ ಹೋರಾಟ ಅನನ್ಯವಾಗಿದೆ ಎಂದು ಹೇಳಿದರು.
ಮೈಸೂರಿನ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಪೀಪಲ್ಸ್ ಪಾರ್ಕ್ನ ಪ್ರಾಂಶುಪಾಲ ಪಿ.ಎಸ್.ಜಾನ್ ಕರ್ನಾಟಕದ ಅಭಿವೃದ್ದಿಯಲ್ಲಿ ಕೊಡಗಿನ ಪಾತ್ರ ಎಂಬ ವಿಚಾರ ಮಂಡಿಸಿ ಮಾತನಾಡಿದರು. ಕೊಡಗಿಗೆ ಹೊರಗಿನಿಂದ ಬಂದವರಿಗೆ ಇಲ್ಲಿನ ಉತ್ತಮ ಗಾಳಿ, ನೀರು, ಪರಿಸರ ಆಹ್ಲಾದ ನೀಡುತ್ತದೆ. ಇಲ್ಲಿನ ಜಲ ಉತ್ತಮ ಗುಣಮಟ್ಟದಾಗಿದೆ. ಜತೆಗೆ ದೇಶಕ್ಕೆ ಕೊಡಗು ಕಾಫಿ ಮೂಲಕ ಶೇ.೩೩ ರಷ್ಟು ಆದಾಯದ ಕೊಡುಗೆ ನೀಡುತ್ತಿದೆ. ಭಾರತ ದೇಶ ಸರಾಸರಿ ಶೇ.೨೧ ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ನಮ್ಮ ಕರ್ನಾಟಕ ರಾಜ್ಯ ಶೇ ೨೩ ರಷ್ಟು ಅರಣ್ಯ ಹೊಂದಿದ್ದು, ಅದರಲ್ಲಿ ಕೊಡಗು ಶೇ.೩೩ ರಷ್ಟು ಅರಣ್ಯವನ್ನು ಹೊಂದಿದೆ ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ಸಾಗರ್, ಜಿಲ್ಲಾ ಕನ್ನಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷ ವಕೀಲ ಮಾದಂಡ ಪೂವಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಜಾನ್ಸ್ನ್, ಕವಿ ವೈಲೇಶ್ ಮಾತನಾಡಿದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಬಸವರಾಜು, ಸಹಾಯಕ ಪ್ರಾಧ್ಯಪಕ ಆರ್.ರಘುರಾಜು ಉಪಸ್ಥಿತರಿದ್ದರು.