ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಪಾಲಾಗಿ 3 ತಿಂಗಳು ಕಳೆದಿದೆ. ಪ್ರಕರಣದ ಕುರಿತಂತೆ ಎಲ್ಲಿಯೂ ಪ್ರತಿಕ್ರಿಯೆ ನೀಡದ ಡಿ ಬಾಸ್ ತಾಯಿ ಮೀನಾ ತೂಗುದೀಪ ಇದೀಗ ಮಗನನ್ನು ಕಾಣಲು ಜೈಲಿಗೆ ಭೇಟಿ ನೀಡಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ನೋಡಲು ಇಂದು ಮೀನಾ ತೂಗುದೀಪ್ ಮತ್ತು ದರ್ಶನ್ ಅವರ ಸಹೋದರಿ ಭೇಟಿ ನೀಡಿದ್ದಾರೆ.
ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಆದರೆ ನಟ ದರ್ಶನ್ ಅವರನ್ನು ಕಾಣಲು ಪತ್ನಿ ವಿಜಯಲಕ್ಷ್ಮೀ, ದರ್ಶನ್ ಸಹೋದರ ಮತ್ತು ಚಿತ್ರರಂಗದ ಕೆಲ ಆಪ್ತರು ಮಾತ್ರವೇ ಬಂದಿದ್ದರು. ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿನಲ್ಲಿರೋ ತಮ್ಮ ಪುತ್ರನ ಭೇಟಿಯಾಗಿದ್ದಾರೆ. ಮಗಳು, ಅಳಿಯ ಮತ್ತು ಮೊಮ್ಮಕ್ಕಳ ಜೊತೆ ಜೈಲಿಗೆ ಆಗಮಿಸಿದ ಮೀನಾ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಜೈಲಿನಲ್ಲಿ ಮಗನ ಸ್ಥಿತಿ ನೋಡಿ ತಾಯಿ ಮೀನಾ ಕಣ್ಣೀರಿಟ್ಟಿದ್ದು, ದರ್ಶನ್ ಕೂಡ ಭಾವುಕರಾಗಿದ್ದಾರೆ. ಆ ಬಳಿಕ ಸಮಾಧಾನ ಮಾಡಿಕೊಂಡು ತಾಯಿ ಹಾಗೂ ಸಹೋದರಿಯನ್ನ ಸಮಾಧಾನಪಡಿಸಿದ್ರು. ಮಗನಿಗಾಗಿ ಮೀನಾ ತೂಗುದೀಪ್ ಎರಡು ಬ್ಯಾಗ್ನಲ್ಲಿ ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದರು.