ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಈ ಬಾರಿಯ ಜಂಬೂಸವಾರಿ ಮೆರವಣಿಗೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ನಡೆಸುತ್ತಿರುವ ತಾಲೀಮು ಮತ್ತಷ್ಟು ಬಿರುಸಿನಲ್ಲಿ ಸಾಗಿದ್ದು, ಈಗಾಗಲೇ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಗ್ತಿದೆ. ವಿಜಯದಶಮಿದಿನದಂದು ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗುವ ಅಭಿಮನ್ಯುವಿಗೆ ಹಿರಣ್ಯಾ ಹಾಗು ಲಕ್ಷ್ಮಿ ಕುಮ್ಕಿ ಆನೆಗಳಾಗಿ ಸಾಥ್ ನೀಡಲಿದ್ದಾರೆ.
ರಾಂಪುರ ಆನೆ ಶಿಬಿರದಿಂದ ಆಗಮಿಸಿರುವ ಲಕ್ಷ್ಮಿ, ಹಾಗೂ ರಾಮಾಪುರ ಆನೆ ಶಿಬಿರದಿಂದ ಆಗಮಿಸಿರುವ ಹಿರಣ್ಯಾ ಈ ಬಾರಿ ಕುಮ್ಕಿ ಆನೆಗಳಾಗಿ ದಸರಾ ಜಂಬೂ ಸವಾರಿಯಲ್ಲಿ ಅಭಿಮನ್ಯುವಿನ ಜೊತೆ ಸಾಗಲಿದ್ದಾರೆ.
ತಾಲೀಮಿನ ವೇಳೆ ಶಿಸ್ತು ಬದ್ದವಾಗಿ ಸಾಗುವ ಮೂಲಕ ಎಲ್ಲರ ಗಮನವನ್ನ ತಮ್ಮತ್ತ ಸೆಳೆದಿದ್ದ ಹಿರಣ್ಯಾ ಹಾಗು ಲಕ್ಷ್ಮಿ ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಮನ್ಯುವಿನ ಜೊತೆ ಕುಮ್ಕಿ ಆನೆಗಳಾಗಿ ಸಾಗಲು ಆಯ್ಕೆ ಮಾಡಿದ್ದಾರೆ .