ಮೈಸೂರು: ಸಿಎಂ ಸಿದ್ದರಾಮಯ್ಯ ಎಂದು ಕೂಡ ಹಣಕ್ಕಾಗಿ ಟೆಂಪ್ಟ್ ಆದವರಲ್ಲ.ನಾವು 40 ವರ್ಷಗಳಿಂದ ಅವರ ಜೊತೆಯಲ್ಲಿದ್ದೇವೆ.ಹಣಕ್ಕಾಗಿ ಅವರು ಯಾವತ್ತು ಹಾತೊರಿದಿಲ್ಲ ಅಂತ ಸಚಿವ ಮಹದೇವಪ್ಪ ಹೇಳಿದ್ರು.
ಮೈಸೂರಲ್ಲಿ ಮಾತಾಡಿದ ಅವ್ರು ,ಸುಮ್ಮನೆ ಇಲ್ಲಸಲ್ಲದ ಆರೋಪ ಕೆಲವರು ಮಾಡುತ್ತಿದ್ದಾರೆ. ಹೋರಾಟದಿಂದ ಸಿದ್ಧಾಂತದಿಂದ ಬಂದವರಿಗೆ ಈ ರೀತಿ ಮಸಿ ಬಳಿಯುವ ಯತ್ನ ನಡೆದಿದೆ. ಮುಂದೆ ರಿಯಲ್ ಎಸ್ಟೇಟ್ ಕಮಿಷನ್ ಎಜೆಂಟ್ ಗಳು, ಭೂಗಳ್ಳರು ಇಂತಹವರೇ ರಾಜಕಾರಣ ಮಾಡಲು ಶುರು ಮಾಡಿ ಬಿಡುತ್ತಾರೆ. ಸಿದ್ಧಾಂತ ಇರುವವರು, ತತ್ವ ಇರುವವರ ಸಂಖ್ಯೆಯೇ ಕಡಿಮೆ ಇದೆ. ಅಂತಹವರನ್ನೇ ಮೂಲೆಗೆ ತಳ್ಳುವ ಪ್ರಯತ್ನ ಮಾಡಿದರೆ ಅದು ರಾಜ್ಯಕ್ಕೆ ಶೋಭೆ ತರುವುದಿಲ್ಲ ಅಂತ ಹೇಳಿದ್ರು.ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗುತ್ತದೆ. ಯಾರೇ ತಪ್ಪು ಮಾಡಿದ್ದರೂ ದಾಖಲೆ ಕೊಡಿ.ದಾಖಲೆಯೇ ಇರುವುದಿಲ್ಲ, ಅವರ ಪಾತ್ರಗಳೇ ಸಾಬೀತಾಗಿರುವುದಿಲ್ಲ. ಆದರೂ ಟೀಕೆ ಶುರು ಮಾಡಿದರೆ ವೈಯುಕ್ತಿಕ ತೇಜೋವದೆಗಿಳಿದರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಪ್ರಶ್ನೆ ಮಾಡಿದ್ರು.