ಸಂಸದ ಯದುವೀರ್ ಒಡೆಯರ್ ಟಾಂಗ್
ಪ್ರತಿನಿಧಿ ವರದಿ ಗೋಣಿಕೊಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಸಂಸದ ಯದುವೀರ್ ಒಡೆಯರ್ ಟಾಂಗ್ ನೀಡಿದರು.
ಹಳ್ಳಿಗಟ್ಟು ಸಿಐಟಿ ಕಾಲೇಜು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭ ಮಾಧ್ಯಮ ಜತೆ ಅಭಿಪ್ರಾಯ ಹಂಚಿಕೊಂಡರು. ರಾಜ್ಯದ ಹಲವೆಡೆ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದ ಬಗ್ಗೆ ಬಿಜೆಪಿ ಯವರ ಕುಮ್ಮಕ್ಕು ಕಾರಣ ಎಂದು ಸಿಎಂ ಆರೋಪ ವಿಚಾರದಲ್ಲಿ ಮಾತನಾಡಿದರು. ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಬೆಂಕಿ ಹಾಕೋದು, ಆರ್ ಎಸ್ ಎಸ್ ಕಚೇರಿಗೆ ನುಗ್ಗೋದು ಇದೆಲ್ಲಾ ಯಾರ ಆಡಳಿತದಲ್ಲಿನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆಯನ್ನು ಸರಕಾರ ಸರಿಯಾಗಿ ಮಾಡಲಿ. ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಈ ಗಲಭೆ ನಡೆಯುತ್ತಿರಲಿಲ್ಲ ಎಂದು ರಾಜ್ಯ ಸರ್ಕಾರದ ಬಗ್ಗೆ ಕಿಡಿಕಾರಿದರು. ಘಟನೆಗಳನ್ನು ನೋಡಿ ಸಚಿವರು ಹೇಳಿಕೆ ಕೊಡಬೇಕು. ಮೊದಲೇ ಸಣ್ಣ ಘಟನೆ ಎಂದು ಹೇಳಿಕೆ ನೀಡಬಾರದು ಎಂದು ಗೃಹ ಸಚಿವರ ನಡೆ ಬಗ್ಗೆ ಯದುವೀರ್ ಟೀಕಿಸಿದರು. ನಡೆದ ಘಟನೆ ನೋಡಿದರೆ ಅಲ್ಲಿ ಬೇರೆಯದೇ ಸ್ಟೋರಿ ಇದೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ನಮ್ಮ ಧಾರ್ಮಿಕ ಭಾವನೆ ದಕ್ಕೆ ತರುತ್ತಿರುವುದು ತುಂಬಾ ನೋವಿನ ವಿಚಾರವಾಗಿದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಆಗ ನಾವು ಶಾಂತಿಯಿAದ ಇರುತ್ತೇವೆ. ನಮಗೆ ನ್ಯಾಯ ಕೊಡದಿದ್ದಲ್ಲಿ ನಮಗೂ ಕಷ್ಟ ಆಗುತ್ತದೆ ಎಂದು ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಟೀಕೆ ವ್ಯಕ್ತಪಡಿಸಿದರು.