ಪ್ರತಿನಿಧಿ ವರದಿ ಗುಂಡ್ಲುಪೇಟೆ
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡ್ಲುಪೇಟೆ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಜಯಂತಿ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಸೇವಾ ಪಕ್ಷಿಕ ಕಾರ್ಯಕ್ರಮವನ್ನು ಗುಂಡ್ಲುಪೇಟೆ ಮಂಡಲದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಶಿವಪುರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತ್ತು.
ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಪಕ್ಷದ ಸದಸ್ಯತ್ವ ಅಭಿಯಾನದ ಚಾ.ನಗರ ಜಿಲ್ಲಾ ಪ್ರಭಾರಿ ಶ್ರೀಮತಿ ಡಾ.ಪ್ರಫುಲ್ಲಾ ಮಲ್ಲಾಡಿ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಶೈಲಾ, ಉಪಾಧ್ಯಕ್ಷೆ ಕುಮಚಳ್ಳಿ ಪಾರ್ವಾತಮ್ಮ, ಅಂಬಿಕಾ, ಪಾರ್ವತಿ ಚೌಡಳ್ಳಿ, ಸಲಿತಾ, ನೀಲಮ್ಮ, ಮಹೇಶ್ವರಿ ಅನೇಕರು ಹಾಜರಿದ್ದರು.