ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಮತ
ಪ್ರತಿನಿಧಿ ವರದಿ ಗುಂಡ್ಲುಪೇಟೆ
ದೇಶದ ರಕ್ಷಣೆಗೆ ಸೈನಿಕರು ಎಷ್ಟು ಮುಖ್ಯವೋ ಅದೇ ರೀತಿ ಸಾರ್ವಜನಿಕ ಸ್ಥಳವನ್ನು ಸ್ವಚ್ಛವಾಗಿ ಇರಿಸಲು ಪೌರಕಾರ್ಮಿಕರ ಪಾತ್ರವು ಬಹಳ ಮುಖ್ಯವಾಗಿದ್ದು ಸೈನಿಕರಷ್ಟೇ ಪೌರಕಾರ್ಮಿಕರು ಮುಖ್ಯ ಎಂದು ಕ್ಷೇತ್ರದ ಶಾಸಕ ಎಚ್ಎಂ ಗಣೇಶ್ ಪ್ರಸಾದ್ ಅಭಿಮತ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ದಿನ ನಗರ, ಪಟ್ಟಣ ಪ್ರದೇಶವು ಸ್ವಚ್ಛವಾಗಿಡುವಲ್ಲಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪೌರಕಾರ್ಮಿಕರ ಪಾತ್ರವು ಮೊದಲಿಗೆ ಇದ್ದು, ನಮಗೆ ಪರಿಸರ ಎಷ್ಟು ಮುಖ್ಯವೋ ಅದೇ ರೀತಿ ಪೌರಕಾರ್ಮಿಕರು ಅಷ್ಟೇ ಮುಖ್ಯ. ಗುಂಡ್ಲುಪೇಟೆ ಪಟ್ಟಣದ ಪರಿಸರ ಇಂದು ಸ್ವಚ್ಛತೆಯಾಗಿ ಇರಲು ಪೌರಕಾರ್ಮಿಕರ ಶ್ರಮ ಅಡಗಿದೆ, ಪಟ್ಟಣ ವ್ಯಾಪ್ತಿಯಲ್ಲಿ ಎಂತಹ ಸಮಸ್ಯೆ ಇದ್ದರೂ ಕಸ ವಿಲೇವಾರಿ ಕೆಲಸದಲ್ಲಿ ಪೌರಕಾರ್ಮಿಕರು ತಮ್ಮದೇ ಆದ ಕೆಲಸ ನಿರ್ವಹಿಸುವ ಮೂಲಕ ಪಟ್ಟಣವನ್ನು ಸುಂದರವಾಗಿಸಲು ಕಾರಣವಾಗಿದ್ದಾರೆ.
ನೂತನ ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿರಣ್ ಗೌಡ
ಬಳಿಕ ಸರ್ಕಾರದಿಂದ ನೀಡಲಾಗುವ ಪೌರಕಾರ್ಮಿಕರ ಸೇಫ್ಟಿ ಕಿಟ್ಗಳನ್ನು ಶಾಸಕ ಗಣೇಶ್ ಪ್ರಸಾದ್ ಅವರು ವಿತರಿಸಿದ್ದಾರು. ಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಸನ್ಮಾನಿಸಿ ಮತ್ತು ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಡೆಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಪೌರಕಾರ್ಮಿಕರ ಮಕ್ಕಳ ಹಾಗೂ ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಿ ಅರ್ಥಪೂರ್ಣವಾಗಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಮಾಜಿ ಕಾಡ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭಾ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನ ಕೌಸರ್, ಪುರಸಭಾ ಸದಸ್ಯ ರಮೇಶ್, ಶ್ರೀನಿವಾಸ್, ಕುಮಾರ್ ನಾಯಕ್, ಮಧು, ಇಲಿಯಾಸ್ ಅಹ್ಮದ್, ಸುರೇಶ್, ಅಣ್ಣಯ್ಯ ಸ್ವಾಮಿ, ಪುರಸಭಾ ಮುಖ್ಯ ಅಧಿಕಾರಿ ವಸಂತ್ ಕುಮಾರಿ, ಪುರಸಭಾ ಆರೋಗ್ಯ ಅಧಿಕಾರಿ ಗೋಪಿ ಸೇರಿದಂತೆ ಪುರಸಭಾ ಆಡಳಿತ ಸಿಬ್ಬಂದಿ, ಪೌರಕಾರ್ಮಿಕರು ಇತರರು ಹಾಜರಿದ್ದರು.
———————–
ಕೋಟ್
ಸರ್ಕಾರದಿಂದ ಪೌರ ಕಾರ್ಮಿಕರಿಗೆ ಬರುವಂತಹ ಪ್ರತಿಯೊಂದು ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡುವುದರ ಮೂಲಕ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ಬೇಡಿಕೆಗಳನ್ನು ಪೌರಕಾರ್ಮಿಕರು ನನ್ನ ಬಳಿ ನೀಡಿದ್ದು, ಮುಂದಿನ ದಿನಗಳಲ್ಲಿ ಅವರ ಬೇಡಿಕೆ ಈಡೇರಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು.
– ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ