ಮೈಸೂರು: ನನಗೆ ತಲೆನೋವು ಅದಕ್ಕಾಗಿ ಮಡಿಕೇರಿ ಕಡೆ ಹೋಗುತ್ತಿದ್ದೇನೆ ಎಂದು ಸಚಿವ ಭೈರತಿ ಸುರೇಶ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತಾಡಿದ ಅವರು, ಮುಡಾ ತಲೆನೋವು ಏನು ಅಲ್ಲ, ಹೀಗೇ ಇರ್ತಾವಲ್ಲ ಬೇರೆ ಸಮಸ್ಯೆಗಳು ಹೀಗಾಗಿ ರಿಲ್ಯಾಕ್ಸ್ ಗಾಗಿ ಹೋಗುತ್ತಿದ್ದೇನೆ. ನಮಗೆ ಮುಡಾ ಪ್ರಕರಣ ತಲೆನೋವು ಎಂದು ಅನ್ನಿಸಿಲ್ಲ. ನಿನ್ನೆ ಎಫ್ಐಆರ್ ಹಾಕಿರುವುದು ನಿರೀಕ್ಷಿತ. ನಮಗೆ ಗೊತ್ತಿತ್ತು ಎಫ್ಐಆರ್ ಆಗುತ್ತೇ ಎಂದು. ನಾವು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ನಾನು ಅದರ ಬಗ್ಗೆ ಸಿಎಂ ಸಿದ್ದರಾಮಯ್ಯರ ಜೊತೆ ಚರ್ಚೆಯೇ ಮಾಡಿಲ್ಲ. ಸಿಎಂ ಜೊತೆ ತಿಂಡಿ ತಿಂದು ಮಾತನಾಡಿಸಿಕೊಂಡು ಹೋಗುತ್ತಿದ್ದೇನೆ. ಮುಡಾದಲ್ಲಿ ನನ್ನ ಅವಧಿಯಲ್ಲಿ ಯಾವ ಹಗರಣವೂ ನಡೆದಿಲ್ಲ. ನನ್ನಿಂದಲೇ ಸಿಎಂಗೆ ಸಮಸ್ಯೆ ಆಗಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಹಗರಣ ನಡೆದ ಕಾಲಾವಧಿ ಯಾವುದು ನೋಡಿಕೊಳ್ಳಿ. ನನ್ನನ್ನೇಕೆ ಇದರಲ್ಲಿ ಎಳೆಯುತ್ತೀರಾ ಎಂದು ಮೈಸೂರಿನಲ್ಲಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ.