ಪ್ರತಿನಿಧಿ ವರದಿ ಸರಗೂರು
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಮತ್ತು ಟಾಟಾ ಕನ್ಸೂಮರ್ಸ್ ಅವರ ಸಹಯೋಗದೊಂದಿಗೆ ರೈತರಿಗೆ ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ಎರೆಹುಳು ವಿತರಣಾ ಕಾರ್ಯಕ್ರಮವನ್ನು ವಿವೇಕಾ ಗ್ರಾಮೀಣ ಜೀವನಾಧಾರ ಕೇಂದ್ರ ಕೆಂಚನಹಳ್ಳಿಯಲ್ಲಿ ಆಯೋಜಿಸಲಾಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕ ಡಾ.ಡೆನ್ನಿಸ್ ಡಿ. ಚೌಹಾಣ್ ಮಾತನಾಡಿ, ಸುಸ್ಥಿರತೆ ಮತ್ತು ಕೃಷಿ ಉಪವಿಭಾಗದ ವತಿಯಿಂದ 44 ರೈತರಿಗೆ ಎರೆಹುಳುಗಳನ್ನು ವಿತರಿಸಿ ಎರೆಹುಳು ಗೊಬ್ಬರದ ಉತ್ಪಾದನೆ, ನಿರ್ವಹಣೆ, ಇರುವೆಗಳಿಂದ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ವಿಭಾಗದ ಹಿರಿಯ ವ್ಯವಸ್ಥಾಪಕ ಪಿ.ಡಿ.ನಾಯಕ ಇದ್ದರು.