ಮೈಸೂರು: ಜಿ ಟಿ ದೇವೇಗೌಡರ ಭಾಷಣ ಅಬ್ಬಾ ಅಬ್ಬಬ್ಬಾ.., ಈ ಪರಾಕ್ರಮ ನೋಡಿದ್ರೇ ಜಿ ಟಿ ದೇವೇಗೌಡ ಮುಡಾ ಫಲಾನುಭವಿ ಇರಬೇಕು. ಇಡೀ ಕಾರ್ಯಕ್ರಮವನ್ನು ಜಿ ಟಿ ದೇವೇಗೌಡ ಹಾಳು ಮಾಡಿದ ಎಂದು ಮೈಸೂರಿನಲ್ಲಿಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಟಿಡಿ ಯ ಭಾಷಣದ ಪರಾಕ್ರಮ ನೋಡಿದರೆ ಅವರು ಮುಡಾ ಫಲಾನುಭವಿ ಇರಬೇಕು ಎಂದಿದ್ದಾರೆ. ದಸರಾ ಉದ್ಘಾಟನಾ ವೇದಿಕೆಯಲ್ಲಿ ಈ ಮಾತುಗಳನ್ನಾಡಿ ಇಡೀ ಕಾರ್ಯಕ್ರಮವನ್ನು ಜಿ ಟಿ ದೇವೇಗೌಡ ಹಾಳು ಮಾಡಿದ. ಇಡೀ ದಸರಾ ಕಾರ್ಯಕ್ರಮವನ್ನು ರಾಜಕೀಯ ನುಂಗಿದೆ. ಸರ್ಕಾರ ಬೀಳಿಸುವ ಮಾತು ಯಾರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಕುಣಿಯುತ್ತಿರುವುದು ಜಿ ಟಿ ದೇವೆಗೌಡಗೆ ಹಳ್ಳಿಹಕ್ಕಿ ವಿಶ್ವನಾಥ್ ಟಾಂಗ್ ನೀಡಿದ್ದಾರೆ. 14ಸೈಟ್ ರಾಜಭವನ, ಹೈ ಕೋರ್ಟ್, ಲೋಕಾಯುಕ್ತ ಎಲ್ಲವನ್ನೂ ಬಳಸಿದೆ. ಅಯ್ಯೋ ದೇವರೆ ನಾಗಪ್ರಸನ್ನ ಅವರ ತೀರ್ಪನ್ನು ಒಮ್ಮೆ ಓದಿ, ಇ ಡಿ ಎಂಟ್ರಿ ಅದ ಮೇಲೆ ಭಾವನಾತ್ಮಕ ಕಾಗದದ ಮೂಲಕ ನಿವೇಶನಗಳನ್ನು ಹಿಂದುರಿಗಿಸಿದ್ದಾರೆ ಎಂದರು.
ಇನ್ನು ನಿನ್ನೆ ದಸರಾ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ದಸರಾ ಉದ್ಘಾಟನೆಯ ಪಾವಿತ್ರ್ಯತೆಯೇ ಹಾಳಾಗಿದೆ. ದಸರಾ ಉದ್ಘಾಟನಾ ಸಮಾರಂಭ ರಾಜಕೀಯ ನಾಯಕರ ವೇದಿಕೆಯಾಗಿತ್ತು. ದಸರಾ ಉದ್ಘಾಟಕರು ಕೂಡ ರಾಜಕೀಯ ಭಾಷಣವನ್ನೇ ಮಾಡಿದರು. ಈ ಮೂಲಕ ಇಡೀ ಕಾರ್ಯಕ್ರಮ ಹೊಲಸು ಕಾರ್ಯಕ್ರಮ ಆಗೋಯ್ತು. ಕಾರ್ಯಕ್ರಮದಲ್ಲಿ ಚಾಮುಂಡಿ ಮಹಿಮೆ, ಜನರ ಸಹಕಾರದ ಮಾತುಗಳೇ ಇರಲಿಲ್ಲ. ಇನ್ನೆಂದು ದಸರಾ ಉದ್ಘಾಟನೆ ಕಾರ್ಯಕ್ರಮವೇ ಬೇಡ ಅನಿಸಿದೆ ಎಂದು ಬೇಸರ ಹೊರಹಾಕಿದರು.