ನಂಜನಗೂಡು: ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ್ದ ಕಾಡಾನೆ ಕಂದಕ್ಕೆ ಬಿದ್ದು ಸಾವನ್ನಪ್ಪಿದೆ. ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ಘಟನೆ ನಡೆದಿದ್ದು, ಸುಮಾರು 40 ವರ್ಷದ ಗಂಡು ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ.
ಕಾಡಿನಿಂದ ನಾಡಿನತ್ತ ಬರುವ ಯತ್ನ ಮಾಡಿರುವ ಆನೆ, ಆನೆಗಳ ಹಾವಳಿ ತಪ್ಪಿಸಲು ನಿರ್ಮಿಸಲಾಗಿದ್ದ ಕಂದಕಕ್ಕೆ ಬಿದ್ದಿದೆ. ಕಂದಕದಲ್ಲಿ ಬಿದ್ದು ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಆನೆತನ್ನು ಕಂಡ ಸ್ಥಳೀಯರು ಸಮೀಪದ ಓಂಕಾರ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸುವಷ್ಟರಲ್ಲಿ ಆನೆ ಸಾವನ್ನಪ್ಪಿದೆ.
ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿ ಎ ಸಿ ಎಫ್ ಪ್ರಭಾಕರ್, ಆರ್ ಎಫ್ ಓ ನಿತಿನ್ ಕುಮಾರ್ ಸೇರಿದಂತೆ ಓಂಕಾರ ವಲಯ ಅರಣ್ಯ ಇಲಾಖೆಯ ವೈಲ್ಡ್ ಲೈಫ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ಜೆಸಿಬಿ ಯಂತ್ರದ ಸಹಾಯದಿಂದ ಮೃತ ಆನೆಯನ್ನು ಮೇಲಕ್ಕೆ ಎತ್ತಿದ್ದು, ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ.