ಪ್ರತಿನಿಧಿ ವರದಿ ಹುಣಸೂರು
ದಸರಾ ಹಬ್ಬದ ನವರಾತ್ರಿ ಪ್ರಾರಂಭದ ಹಿನ್ನೆಲೆಯಲ್ಲಿ ಗುರುವಾರ ಹುಣಸೂರು ಪಟ್ಟಣದ ಟ್ಯಾಲೆಂಟ್ ಶಾಲೆಯಲ್ಲಿ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ. ತಾಲೂಕಿನಲ್ಲಿಯೇ ಮೊಂದಲ ಭಾರಿಗೆ ಟ್ಯಾಲೆಂಟ್ ಶಾಲೆಯು ಈ ರೀತಿಯ ಕಾರ್ಯಕ್ರಮ ತಂದಿರುವುದು ಆಕರ್ಷಣಿಯ.
ರಾಜ ರಾಣಿ ಗೊಂಬೆ, ಶ್ರೀಕೃಷ್ಣನ ಜನನ, ಉಗ್ರ ನರಸಿಂಹ ಅವತಾರ, ವಿಷ್ಣುವಿನ ಅವತಾರ, ರಾಮಾಯಣ, ಮಹಾಭಾರತ ದಂತಹ ಕಥಾ ಚಿತ್ರಣವನ್ನು ಒಳಗೊಂಡಂತ ಬೊಂಬೆಗಳನ್ನು ಪ್ರದರ್ಶನ ಮಾಡಲಾಗಿದೆ. ಪ್ರತಿದಿನ ಶಾಲಾ ವಿದ್ಯಾರ್ಥಿಗಳು ತರಗತಿ ವಾರು ನವದುರ್ಗೆಯರ ಪೂಜಾ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ಬೊಂಬೆ ಕುರಿಸುವ ಪದ್ಧತಿಗೆ ಇತಿಹಾಸವೇ ಇದೆ. ಈ ಸಂಸ್ಕೃತ ವೈಭವವನ್ನು ವಿದ್ಯಾರ್ಥಿಗಳಿಗೆ ಸಾರುವ ಕೆಲಸ ಶಾಲೆ ಮಾಡುತ್ತಿದೆ.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ನವೀನ್ ರೈ, ನಿರ್ದೇಶಕ ಆರ್.ಎನ್.ಮಂಜುನಾಥ, ಪ್ರಾಂಶುಪಾಲ ಎಂ.ಟಿ.ಮಂಜುನಾಥ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.