ಬೇರೆ ಅಂಗಾಂಗಗಳಿಗಿಂತ ಕಣ್ಣು ಸೂಕ್ಷ್ಮವಾದ ಅಂಗವಾಗಿದ್ದು, ಅದನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂದರು ಡಾ.ನೇತ್ರಹರ್ಷ ಹೇಳಿದರು.
ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವತಿಯಿಂದ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಮತ್ತು ಕಣ್ಣಿನ ನರ ಸಮಸ್ಯೆ ಇರುವವರನ್ನು ಪತ್ತೆಹಚ್ಚಿ ಲೇಸರ್ ಮೂಲಕ ಶಸ್ತ್ರಚಿಕಿತ್ಸೆ ನೀಡುವ ಕಾರ್ಯಕ್ರಮವನ್ನು ಆಸ್ಪತ್ರೆಯಲ್ಲಿ ಆಯೋಜನೆ ಮಾಡಲಾಯಿತು.
ಡಾ.ಚೇತನ್ ಕುಮಾರ್ ಮಾತನಾಡಿ, ಕೋವಿಡ್ ನಂತರ ಇಲ್ಲಿವರೆಗೂ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ೧೭೩೨ ಕಿಂತ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇಂತಹ ಶಿಬಿರಗಳನ್ನು ಸಾರ್ವಜನಿಕರು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ನಿವೃತ್ತ ಐಪಿಎಸ್ ಅಧಿಕಾರಿ ಚಮನ್ ಲಾಲ್ ಮಾತಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆ ೪೦ ವರ್ಷಗಳಿಂದ ಸರ್ಕಾರ ಜತೆಗೂಡಿ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಇಲ್ಲಿ ಜಲಸಂಪತ್ತು, ಅರಣ್ಯ ಸಂಪತ್ತು, ಭೂಸಂಪತ್ತು ಹೇರಳವಾಗಿದೆ. ಪ್ರಕೃತಿಯ ಸೌಂದರ್ಯ ಸವಿಯಲು ದೇವರು ನಮಗೆ ಕಣ್ಣು ಕೊಟ್ಟಿದ್ದಾರೆ. ಅದನ್ನೂ ಕಾಪಾಡಲೂ ಕೂಡ ಕೌಶಲ್ಯ ಭರಿತವಾದ ವೈದ್ಯರನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಕಣ್ನಿಗೆ ದೊರೆಯುವ ಸೌಲಭ್ಯವನ್ನು ಪಡೆದುಕೊಂಡು ಆರೋಗ್ಯವಂತರಾಗಿ ಎಂದು ಕರೆ ನೀಡಿದರು.
ಆರೋಗ್ಯ ಕ್ಷೇತ್ರದ ಮುಖ್ಯಸ್ಥ ಡಾ.ಜಿ.ಎಸ್.ಕುಮಾರ್ ಮಾತನಾಡಿ, ಇತರೆ ಆರೋಗ್ಯ ಸೇವೆಯ ಜತೆಗೆ ಡಯಬಿಟಿಕ್ ರೆಟಿನೋಪತಿ ಮತ್ತು ಮಕ್ಕಳ ಕಣ್ಣಿನ ಚಿಕಿತ್ಸೆ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿ, ಅಂಧತ್ವದಿಂದ ಬೆಳಕಿನೆಡೆಗೆ ತರಲು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವೈದ್ಯರ ತಂಡ ಶ್ರಮಿಸುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ನೇತ್ರ ತಜ್ಞರು ಆದ ಡಾ ನರೇಂದ್ರ ರಾಮಕೃಷ್ಣ ಮಾತನಾಡಿದರು. ಇಂಟರ್ ನ್ಯಾಷಿನಲ್ ಇನ್ಸ್ಟಿಟ್ಯೂಟ್ ಆಫ್ ಆಪ್ತಾಲ್ಮೊಲಜಿ ಡಾ.ವಿನಯ್ ಕುಮಾರ್, ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕಿ ಬಿ.ಜಿಸಂಧ್ಯ, ವೈದ್ಯ ಡಾ.ಅಭಿಷೇಕ್, ಡಾ.ಅನುಶ್ರೀ, ರಾಕೇಶ್, ಪುಟ್ಟಮ್ಮ ಅಪ್ರೋಶ್ ಪಾಷ, ಎಂ.ಪಿ.ರಮೇಶ್, ಗೋಪಾಲಕೃಷ್ಣ ರೂಪೇಶ್, ಮಮತ, ಕವಿತ, ಸುಚಿತ್ರ ಶ್ಯಾಮಲ, ದೀಪಿಕಾ, ಭೂಮಿ, ಇನ್ನಿತರ ಸಿಬ್ಬಂದಿ ಸಾರ್ವಜನಿಕರು ಇದ್ದರು.