ಮೈಸೂರು: ನನ್ನ ಮೇಲೆ ಆರೋಪ ಬಂದಾಗಲೂ ರಾಜೀನಾಮೆ ನೀಡಿದ್ದೆ, ನನ್ನ ಮೇಲೆ ತನಿಖೆ ಆಯ್ತು ಕ್ಲೀನ್ ಚಿಟ್ ಕೂಡ ಸಿಕ್ತು. ಈಗ ಸಿಎಂ ವಿರುದ್ಧವೇ ಆರೋಪ ಬಂದಿದೆ ನೀವೇಕೆ ರಾಜೀನಾಮೆ ನೀಡುತ್ತಿಲ್ಲ?
ನನ್ನ ವಿರುದ್ಧ ನೀವೇ ಹೋರಾಟ ಮಾಡಿದ್ರಿ, ಈಗ ನೀವು ಕೂಡ ರಾಜೀನಾಮೆ ನೀಡಿ ತನಿಖೆ ಎದುರಿಸಿ. ಡಬಲ್ ಸ್ಟ್ಯಾಂಡ್ ತಕೋಬೇಡಿ ನಿಮಗೊಂದು ಕಾನೂನು ನನಗೊಂದು ಕಾನೂನು ಇದೆಯಾ ಇದೆಯಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಸಿಎಂ ವಿರುದ್ಧ ಮುಡಾ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೂ ಆರೋಪ ಬಂದಿತ್ತು, ನಾನು ರಾಜಿನಾಮೆ ನೀಡಿ ತನಿಖೆ ಎದುರಿಸಿ, ಕ್ಲೀನ್ ಚಿಟ್ ಪಡೆದೆ.ಅಂದು ನನ್ನ ರಾಜಿನಾಮೆಗೆ ಹೋರಾಟ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಇಂದು ಅವರು ರಾಜಿನಾಮೆ ನೀಡದೆ ಡಬಲ್ ಸ್ಟ್ಯಾಂಡ್ ತೊಗೊಳ್ತಾ ಇದ್ದಾರೆ. ನಿಮಗೊಂದು ಕಾನೂನು, ನಮಗೊಂದು ಕಾನೂನಾ ಎಂದು ಪ್ರಶ್ನೆ ಮಾಡಿದ್ದಾರಲ್ಲದೆ, ರಾಜಿನಾಮೆ ಕೊಟ್ಟು ತನಿಕೆ ಎದುರಿಸಿ, ಕ್ಲೀನ್ ಚಿಟ್ ಸಿಕ್ರೇ ಮತ್ತೆ ಸಿಎಂ ಆಗಿ ಎಂದು ಹೇಳಿದ್ದಾರೆ.
ಇನ್ನು ಹುಬ್ಬಳ್ಳಿ ಗಲಭೆ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ ಸವದತ್ತಿ ಯಲ್ಲಮ್ಮನ ಪೂಜೆಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಪಾರ್ವತಮ್ಮನವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಹಣೆಗೆ ಕುಂಕುಮ ಇಟ್ಟು ಕೊಂಡಿದ್ದಾರೆ. ಮೇಲಿಂದ ಮೇಲೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಕೆಲಸ ಆಗುತ್ತಿದೆ. ನಿಮ್ಮ ಶ್ರೀಮತಿಯವರು ಸಾಕಷ್ಟು ಪೂಜೆ ಮಾಡಿಕೊಂಡು ಬಂದಿದ್ದಾರೆ. ನೀವು ಕೂಡ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸಿ, ಕುಂಕುಮ ಹಾಕಿಕೊಳ್ಳುವ ಕೆಲಸ ಮಾಡಿದ್ದೀರಾ. ಯಾರು ದಂಗೆ ಎದ್ದರು, ಪೋಲೀಸರ ಮೇಲೆ ಯಾರು ದೌರ್ಜನ್ಯ ಮಾಡಿದ್ರು.ಪೋಲೀಸರ ಮೇಲೆ ಗಲಾಟೆ ಮಾಡಿದ್ದವರ ಪ್ರಕರಣ ರದ್ದು ಮಾಡಲು ಮುಂದಾಗಿದ್ದೀರಿ. ಒಂದು ಕಡೆ ಪೂಜೆ ಸಲ್ಲಿಸಿ ಕುಂಕುಮ ಹಾಕಿಕೊಳ್ಳುತ್ತಿರ. ಮತ್ತೊಂದೆಡೆ ದೇವಸ್ಥಾನ ಧ್ವಂಸಕ್ಕೆ ಮುಂದಾದವರ ಪ್ರಕರಣ ರದ್ದು ಮಾಡಲು ಮುಂದಾಗಿದ್ದೀರಾ ಇದನ್ನು ಸಹಿಸಲ್ಲ ಎಂದರು.
ಈಗ ಸಿಎಂ ಪ್ರಾಮಾಣಿಕ ಪೂಜೆ ಮಾಡುತ್ತಿದ್ದಾರೆ. ವೋಟಿಗಾಗಿ ಓಲೈಕೆ ಮಾಡೋದು ಸರಿಯಲ್ಲ. ದೇಶದ್ರೋಹಿ, ಭಯೋತ್ಪಾದಕರ ಕೇಸ್ ವಾಪಸ್ ಪಡೆದಿರೋದು ಸರಿಯಲ್ಲ. ಸವದತ್ತಿ ಯಲ್ಲಮ್ಮ, ಚಾಮುಂಡೇಶ್ವರಿ ತಾಯಿ ಕ್ಷಮಿಸಲ್ಲ. ಮುಸಲ್ಮಾನರ ತುಷ್ಟಿಕರಣವೇ ಇದಕ್ಕೆಲ್ಲ ಕಾರಣ. ಆರ್ ಎಸ್ ಎಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಾತನಾಡುತ್ತಾರೆ. ದೇಶದ ರಕ್ಷಣೆ ದೇಶ ಸೇವೆ ಮಾಡುತ್ತಿರೋದು ಆರ್ ಎಸ್ಎಸ್.
ಈ ಆರ್ ಎಸ್ಎಸ್ ಬಗ್ಗೆ ಟೀಕೆ ಮಾಡಿ ಮಾಡಿ ಕಾಂಗ್ರೆಸ್ ನಿರ್ನಾಮ ಆಗ್ತಿರೋದು. ಸಂಗೊಳ್ಳಿ ರಾಯಣ್ಣ, ಚನ್ನಮ್ಮ ಬ್ರಿಗೇಡ್ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಂತಿಮವಾದ ತೀರ್ಮಾನ ಇನ್ನು ಆಗಿಲ್ಲ.
ಬಾಗಲಕೋಟೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಈ ಸಮಾವೇಶಕ್ಕೆ ಮೃತುಂಜಯ ಸ್ವಾಮಿ ಸೇರಿದಂತೆ ಹಲವರು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.