ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾದರಪಡಿಸಿದ ಸ್ತಬ್ಧ ಚಿತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಇತರೆ ಇಲಾಖೆ-ನಿಗಮ ಮಂಡಳಿಗಳಿಂದ ಸಾದರಪಡಿಸಿದ 51 ಸ್ತಬ್ಧ ಚಿತ್ರಗಳು ಪೈಕಿ ಉನ್ನತ ಮಟ್ಟದ ಸಭೆ ನಿರ್ಣಯದಂತೆ ಬಹುಮಾನಗಳ ಆಯ್ಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆ ನಿರ್ಣಯದಂತೆ, ತೀರ್ಪುಗಾರರ ತೀರ್ಪಿನ ಆಧಾರದ ಮೇರೆಗೆ ಬಹುಮಾನಗಳ ಆಯ್ಕೆ ಮಾಡಲಾಗಿದೆ. ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟಾರೆ 51 ಸ್ತಬ್ಧಚಿತ್ರಗಳು ಸಾಗಿದ್ದು, ಇವುಗಳ ಪೈಕಿ ಜಿಲ್ಲಾವಾರು ಮತ್ತು ವಿವಿಧ ಇಲಾಖೆ/ನಿಗಮ ಮಂಡಳಿಗಳು ಎಂಬ ಎರಡು ವಿಭಾಗಗಳಲ್ಲಿ ಬಹುಮಾನ ನೀಡಲಾಗಿದೆ.
ಜಿಲ್ಲಾವಾರು ಭಾಗವಹಿಸಿದ ಸ್ತಬ್ಧಚಿತ್ರಗಳ ಫಲಿತಾಂಶ
ಜಿಲ್ಲಾವಾರು ಭಾಗವಹಿಸಿದ ಸ್ತಬ್ಧಚಿತ್ರಗಳ ಫಲಿತಾಂಶ
ಮಂಡ್ಯ ಜಿಲ್ಲೆಗೆ ಪ್ರಥಮ ಬಹುಮಾನ.
ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣ ರಾಜಸಾಗರ ಅಣೆಕಟ್ಟು ಸ್ತಬ್ಧ ಚಿತ್ರ.
ಧಾರವಾಡ ದ್ವೀತಿಯ ಬಹುಮಾನ.
ಇಸ್ರೋ ಗಗನಯಾನದಲ್ಲಿ, ಹಣ್ಣಿನ ನೊಣಗಳು ಸ್ತಬ್ಧ ಚಿತ್ರ.
ಚಾಮರಾಜನಗರ ತೃತೀಯ ಬಹುಮಾನ.
ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು ಸ್ತಬ್ಧ ಚಿತ್ರ.
ಉಡುಪಿ ಸಮಾಧಾನಕರ ಬಹುಮಾನ.
ಜಿಲೆಯ ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು ಸ್ತಬ್ಧ ಚಿತ್ರ.
ಗದಗ ಜಿಲ್ಲೆ ಸಮಾಧಾನಕರ ಬಹುಮಾನ.
ಗ್ರಾಮ ಸಭೆ-ಹಳ್ಳಿಯ ವಿಧಾನಸಭೆ ಸ್ತಬ್ಧ ಚಿತ್ರ.
ಮೈಸೂರು ಜಿಲ್ಲೆ ಸಮಾಧಾನಕರ ಬಹುಮಾನ.
ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ ಸ್ತಬ್ಧ ಚಿತ್ರ.
ಚಿಕ್ಕಮಗಳೂರು ಜಿಲ್ಲೆ ಸಮಾಧಾನಕರ ಬಹುಮಾನ
ತೇಜಸ್ವಿ ವಿಸ್ಮಯ ಲೋಕ ಸ್ತಬ್ಧ ಚಿತ್ರ.
ವಿವಿಧ ಇಲಾಖೆ/ನಿಗಮ ಮಂಡಳಿಗಳು ಭಾಗವಹಿಸಿದ ಸ್ತಬ್ಧಚಿತ್ರಗಳ ಫಲಿತಾಂಶ
ಸಾದರಪಡಿಸಿದ ಸ್ತಬ್ಧಚಿತ್ರಗಳ ವಿಷಯ
ಸಾದರಪಡಿಸಿದ ಸ್ತಬ್ಧಚಿತ್ರಗಳ ವಿಷಯ
ಪ್ರಥಮ ಬಹುಮಾನ.
ವಾರ್ತಾ ಇಲಾಖೆ- ವಿಶ್ವಗುರು ಬಸವಣ್ಣ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ
ದ್ವೀತಿಯ ಬಹುಮಾನ.
ಗ್ರಾಮಿಣ ಕಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ
ಗ್ರಾಮೀಣ ಜನರ ಆರೋಗ್ಯದಲ್ಲಿ, ಸುಸ್ಥಿರತೆ ಸಾಧಿಸುವುದು
ತೃತೀಯ ಬಹುಮಾನ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ
ಸಮಾಧಾನಕರ ಬಹುಮಾನ.
ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ
ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಸಮಾಧಾನಕರ ಬಹುಮಾನ.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ
ಸ್ವಸ್ಥ ಮೆದುಳು : ಸ್ಪಷ್ಟ ಮಾತು
ಸಮಾಧಾನಕರ ಬಹುಮಾನ
ಕಾರ್ಮಿಕ ಇಲಾಖೆ
ಕಾರ್ಮಿಕ ಹಿತರಕ್ಷಣೆ
ಸಮಾಧಾನಕರ ಬಹುಮಾನ
ಡಾ. ಬಾಬು ಜಗಜೀವನ್ ರಾಂ ಚರ್ಮ ನಿಗಮದ ಉತ್ಪನ್ನಗಳ ಮಾದರಿ
ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
51 ಟ್ಯಾಬ್ಲೋಗಳ ಪೈಕಿ ಜಿಲ್ಲಾವರು 7 ಬಹುಮಾನ , ಮತ್ತು ವಿವಿಧ ಇಲಾಖೆಗಳ ಪೈಕಿ 7 ಬಹುಮಾನಗಳನ್ನು ಪಡೆದಿವೆ.