ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರಾಜಕೀಯ ಮಾತನಾಡಲ್ಲ ಎಂದು ಶಾಸಕ ಜಿಟಿ.ದೇವೇಗೌಡ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ಹೇಳಿದ್ದಾರೆ.
ನಾಡದೇವಿ ಚಾಮುಂಡೇಶ್ವರಿ ರಥೋತ್ಸವದ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅವರು ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದ ಅವರು, ಮುಡಾ ಅಧ್ಯಕ್ಷರ ರಾಜೀನಾಮೆ ಹಾಗೂ ಚನ್ನಪಟ್ಟಣ ಉಪ ಚುನಾವಣೆ ಬಗೆಗಿನ ಪ್ರಶ್ನೆಗೆ ಜಿಟಿಡಿ ಸೈಲೆಂಟ್ ಆಗಿದ್ದಾರೆ. ಇದೇ ವೇಳೆ ನಾನು ದಸರಾ ವೇಳೆ ವೇದಿಕೆಯಲ್ಲಿ ಮಾತನಾಡಿದ್ದು ಅಪವಿತ್ರ ಎಂದು ಹಲವರು ಹೇಳಿದ್ದಾರೆ. ಇದನ್ನೆ ಹೇಳಿ ಸಾಕಷ್ಟು ಜನ ನನಗೆ ಬುದ್ದಿ ಹೇಳಿದ್ದಾರೆ. ದೇವೇಗೌಡ ಚಾಮುಂಡಿ ಸನ್ನಿಧಿ ಅಪವಿತ್ರ ಮಾಡಿಬಿಟ್ರು ಅಂತೆಲ್ಲಾ ಮಾತಾಡಿದ್ದಾರೆ. ಅದಕ್ಕಾಗಿ ನಾನು ಇಲ್ಲಿ ಯಾವುದೇ ರಾಜಕಾರಣ ಮಾತನಾಡಲ್ಲ. ನಾಡಿನ ಜನರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ಚಾಮುಂಡಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ಜಿ.ಟಿ.ದೇವೇಗೌಡ ತಿಳಿಸಿದ್ರು.