ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಶಶಿಕಲಾ ಮಾಹಿತಿ
ಪ್ರರತಿನಿಧಿ ವರದಿ ಬೇಲೂರು
ತಾಲೂಕಿನ ಕಾನೂನು ಸೇವಾ ಸಮಿತಿ ವತಿಯಿಂದ ಜು.೧೩ ರಂದು ಬೃಹತ್ ಲೋಕ್-ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬೇಲೂರು ಜೆಎಂಎಫ್ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶರಾದ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಎಂ.ಎಸ್.ಶಶಿಕಲಾ ಹೇಳಿದರು.
ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುವ ರಾಷ್ಟ್ರೀಯ ಬೃಹತ್ ಲೋಕ್ ಅದಾಲತ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕ್ ಅದಾಲತ್ ಬಾಕಿರುವ ಪ್ರಕರಣಗಳು ಅಥಾವ ನ್ಯಾಯಲಯದಲ್ಲಿ ವ್ಯಾಜ್ಯ ಪೂರ್ವ ಹಂತದಲ್ಲಿಯೇ ಇತ್ಯರ್ಥವಾಗುವ ವೇದಿಕೆಯಾಗಿದೆ. ಲೋಕ್ ಅದಾಲತ್ ಎಂಬುದು ರಾಜಿ ಅಥಾವ ಸಂಧಾನದ ವ್ಯವಸ್ಥೆಯಾಗಿದೆ. ಇದನ್ನು ಜನರ ನ್ಯಾಯಾಲಯ ಎಂದು ಕೂಡ ಕರೆಯುತ್ತಾರೆ. ತ್ವರಿತ ನ್ಯಾಯ ಒದಗಿಸುವುದು, ವಿವಾದ ಇತ್ಯರ್ಥದ ರಾಜೀ ವಿಧಾನ ಮತ್ತು ಲೋಕ ಅದಾಲತ್ ಕಾನೂನು ಪ್ರಾವಿತ್ರ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಕಕ್ಷಿದಾರರ ಸಮ್ಮುಖದಲ್ಲಿ ಸಂದಾನ ನಡೆಸಿ ಸೂಕ್ತ ನ್ಯಾಯ ನೀಡುವ ನಿಟ್ಟಿನಲ್ಲಿ ಲೋಕ್ ಅದಾಲತ್ ಕಾರ್ಯನಿರ್ವಹಿಸುತ್ತದೆ ಎಂದ ಅವರು ಹಲವು ವರ್ಷಗಳಿಂದ ಬಾಕಿ ಉಳಿದ ಚೆಕ್ ಪ್ರಕರಣಗಳು, ಬ್ಯಾಂಕ್ ಸಾಲದ ಪ್ರಕರಣಗಳು, ಭೂ ವಿವಾದದ ದಾವೆಗಳು, ಸಿವಿಲ್ಗೆ ಸಂಬಂಧ ಪಟ್ಟ ಸಣ್ಣ-ಪುಟ್ಟ ಪ್ರಕರಣಗಳನ್ನು ಮತ್ತು ಕ್ರಿಮಿನಲ್ ದಾವೆಗಳನ್ನು ಉಭಯತ್ರರಲ್ಲಿ ಸಂಧಾನ ನಡೆಸಿ ಲೋಕ್ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಳಿಸುವುದು. ಇನ್ನು ನ್ಯಾಯಾಲಯಕ್ಕೆ ಹಲವು ವರ್ಷದಿಂದ ಅಲೆಯುವ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಜುಲೈ ೧೩ ರಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಜೆಎಂಎಫ್ಸಿ ಕಿರಿಯ ಶ್ರೇಣಿ ನ್ಯಾಯಾಧೀಶರು ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ನಾಗೇಂದ್ರ, ಸರ್ಕಾರಿ ಅಭಿಯೋಜಕರಾದ ಗೀತಾಮಣಿ ಮತ್ತು ಶಶಿಕಲಾ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಜೆ.ಸಿ.ಪುಟ್ಟಸ್ವಾಮಿಗೌಡ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.