ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದ ತುಂಗಾ ಹಾಲು ಉತ್ಪಾದಕರ ಸಂಘದ ಸಭೆಯಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಹಾಗು ನಾಮ ನಿರ್ದೇಶನ ಸದಸ್ಯ ಬಿ ಎ ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದಿದೆ.
ಮೈ ಮುಲ್ ನಷ್ಟದಲ್ಲಿದೆ, ಇದಕ್ಕೆ ಪ್ರಸನ್ನ ಕಾರಣ ಎಂದು ನಾಮ ನಿರ್ದೇಶನ ಸದಸ್ಯ ಬಿ ಎ ಪ್ರಕಾಶ್ ಗಲಾಟೆ ಶುರು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಶಾಸಕ ಕೆ ಮಹದೇವ್ ಪುತ್ರ ಪ್ರಸನ್ನ, ನಾಮ ನಿರ್ದೇಶಿತರಿಗೆ ಸಭೆಗೆ ಪ್ರವೇಶವಿಲ್ಲ ಎಂದು ವಾದ ಶುರುಮಾಡಿದ್ದಾರೆ. ಈ ವೇಳೆ ಪರಸ್ಪರ ಕೈ ಕೈ ಮಿಲಾಯಿಸಲು ಇಬ್ಬರೂ ಮುಂದಾಗಿದ್ದು ಇತರ ಸದಸ್ಯರು ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಬಳಿಕ ಇಬ್ಬರೂ ಸಭೆಯಿಂದ ನಿರ್ಗಮಿಸಿದ್ದಾರೆ.ಕಡೆಗೆ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ಸಭೆ ಮುಂದೂಡಲಾಗಿದೆ.