ಪ್ರತಿನಿಧಿ ವರದಿ ತಿ.ನರಸೀಪುರ
ನನ್ನ ತಂದೆಯವರನ್ನು ರಾಜ್ಯ ಮಟ್ಟದ ನಾಯಕರನ್ನಾಗಿ ಬೆಳೆಸಿದ್ದೀರಿ, ಅದು ಕೇವಲ ಒಂದು ಸಮುದಾಯದಿಂದ ಮಾತ್ರ ಸಾಧ್ಯವಾಗಿಲ್ಲ. ಸಮಾಜ ಎಲ್ಲ ವರ್ಗದ ಜನರಿಂದ ಮಾತ್ರ ಜನನಾಯಕನಾಗಲು ಸಾಧ್ಯ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮೂಗೂರು ಹೋಬಳಿಯ ವಾಟಾಳು, ಕೊತ್ತೇಗಾಲ ಮತ್ತು ಕರೋಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣಾ ಪ್ರಚಾರದ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ವರಿಷ್ಟರು ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ . ಕಳೆದ 20 ವರ್ಷಗಳಿಂದ ನಿಮ್ಮೆಲ್ಲರ ಮಧ್ಯೆ ಬೆಳೆದಿದ್ದ ನನ್ನನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ. ನಮ್ಮ ತಂದೆಯವರನ್ನು ಈ ಮಟ್ಟಕ್ಕೆ ಬೆಳೆಸಿದ್ದೀರಿ. ನನಗೂ ನಿಮ್ಮ ಸಹಕಾರ ಅವಶ್ಯವಾಗಿದೆ.ಹಾಗಾಗಿ ನೀವು ನನಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೆ ಮುನ್ನ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು , ಸರ್ಕಾರ ಅಧಿಕಾರಕ್ಕೆ ಬಂದ ತತ್ ಕ್ಷಣ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ ಮತ್ತು ಯುವನಿಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಎಲ್ಲ ಭರವಸೆಗಳನ್ನು ಈಡೇರಿಸಿದೆ. ನನ್ನ ತಂದೆಯವರು ಕೂಡ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ನನಗೆ ಮತ ನೀಡಬೇಕು ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಹ್ಯಾಕಾನೂರು ಉಮೇಶ್ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕೂಡ ಗ್ಯಾರಂಟಿ ಯೋಜನಗೆಗಳ ಫಲಾಭವಿಗಳು. ಮಹಿಳೆಯ ಆರ್ಥಿಕ ಸ್ವಾವಲಂಬನೆಗೆ ಕಾಂಗ್ರೆಸ್ ಪಕ್ಷ ಕಂಕಣಬದ್ಧವಾಗಿದ್ದು, ಜನಪರ ಯೋಜನೆಗಳನ್ನು ಜಾರಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಎಲ್ಲರು ಬೆಂಬಲಿಸಬೇಕು ಎಂದರು. ಕಾಂಗ್ರೆಸ್ ಕಾರ್ಯಕರ್ತರು ಎಲ್ಲ ವರ್ಗದ ಜನರ ಹತ್ತಿರ ತೆರಳಿ ಪಕ್ಷ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿ ಮತ ಕೇಳಬೇಕು. ಎಂದರು.
ಮಾಜಿ ಶಾಸಕ ಹೆಜ್ಜೆಗೆ ಶ್ರೀನಿವಾಸಯ್ಯ , ಮಾಜಿ ಜಿಪಂ ಸದಸ್ಯ ತಲಕಾಡು ಮಂಜುನಾಥ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಡಿ. ಬಸವರಾಜು, ಎಸ್. ಸಿ ಎಸ್. ಟಿ. ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಹೊಸಪುರ ಮಲ್ಲು, ಪೂರ್ವಜ, ಮಾಡ್ರಹಳ್ಳಿ ಶಿವಮೂರ್ತಿ, ತೋಟ್ಟವಾಡಿ ಚಂದ್ರಧರ್, ಕೊತ್ತೇಗಾಲ ಬಸವರಾಜು, ಕೆ. ಸಿ. ವಿರೇಶ್, ನರಸಿಂಹಮಾದನಾಯಕ,ಚಂದ್ರಪ್ಪ, ಮರಯ್ಯ,ಕನ್ನಹಳ್ಳಿ ಲಕ್ಷ್ಮಣ್, ಸಿದ್ದಪ್ಪಸ್ವಾಮಿ, ಕುಮಾರಸ್ವಾಮಿ, ಪಟೇಲ್ ಕುಮಾರ್, ಶಿವಕುಮಾರಸ್ವಾಮಿ, ಕನ್ನಹಳ್ಳಿ ಶಿವಕುಮಾರ್, ವಾಟಾಳು ಗ್ರಾಪಂ ಅಧ್ಯಕ್ಷ ಸೋಮಣ್ಣ, ವಾಟಾಳು ರಾಚೆಗೌಡ, ಮಂಜುನಾಥ್ (ಮಸಣೇಗೌಡ ) ಮಾಜಿ ಅಧ್ಯಕ್ಷ ವಾಟಾಳು ನಾಗೇಶ್, ಮಹದೇವಸ್ವಾಮಿ, ಮೂಗೂರು ಮೋಳೆ ಮಹದೇವಸ್ವಾಮಿ(ಬೆಳ್ಳಿ), ಶಿವಕುಮಾರ್, ಕುಮಾರ್, ನಟರಾಜು,ರಾಮಚಂದ್ರ ಹಾಜರಿದ್ದರು.