ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ । ಕೈ ಪಕ್ಷ ಪರ ಪ್ರಚಾರ ಸಭೆ
ಎಚ್.ಡಿ.ಕೋಟೆ : ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಕಂಚಮಳ್ಳಿ, ಹಂಪಾಪುರ, ಹೊಮ್ಮರಗಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಪ್ರಚಾರಸಭೆಯಲ್ಲಿ ಮಾತನಾಡಿದರು
ನಾನುನು ಶಾಸಕನಾಗಿ ತಾಲೂಕಿನ ಪ್ರತಿ ಗ್ರಾಮಗಳಿಗೂ ಸುಮಾರು ಎರಡು ಮೂರು ಬಾರಿ ಭೇಟಿ ಮಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಮ್ಮ ತಾಲೂಕು ಇನ್ನೂ ಅಭಿವೃದ್ಧಿ ಹೊಂದಲು ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರಿಗೆ ಅತಿಹೆಚ್ಚಿನ ಮತ ನೀಡ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ನನ್ನ ರಾಜಕೀಯ ಗುರುಗಳಾದ ಧ್ರುವನಾರಾಯಣ ಅವರ ಮಾರ್ಗವನ್ನು ನಮ್ಮ ಪಕ್ಷ ಎಲ್ಲ ಮುಖಂಡರು ಕಾರ್ಯಕರ್ತರು ಅನುಸರಿಸಬೇಕು. ‘ನಮ್ಮ ಬೂತ್ ನಮ್ಮ ಹೊಣೆ’ ಎಂದು ತಮ್ಮ ಬೂತ್ ಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅತಿ ಹೆಚ್ಚು ಮತ ಬರುವಂತೆ ಮಾಡಬೇಕು. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು ಸಾಕಷ್ಟು, ತಾಲೂಕಿಗೆ ಕೆಲಸ ಮಾಡಲು ಸಹಕಾರ ಮಾಡ ಎಂದರು.
ಮೈಮೂಲ್ ನಿರ್ದೇಶಕ ಈರೇಗೌಡ ಮಾತನಾಡಿ, ರಾಜ್ಯದಲ್ಲಿ ಪೂರ್ಣ ಅವಧಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದು, ತಾಲೂಕನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಈ ಬಾರಿ ಲೋಕಸಭೆಯ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು ಎಂದರು.
ಕಳೆದ ಬಾರಿ ಸಂಸದ ಧ್ರುವನಾರಾಯಣ್ ಚಿಕ್ಕಮಾದು ಅವರು ಜೋಡಿತ್ತಿನಂತೆ ತಾಲೂಕಿನಲ್ಲಿ ಕೆಲಸ ಮಾಡಿದ್ದರು. ಈ ಬಾರಿ ಕೂಡ ಶಾಸಕ ಅನಿಲ್ ಅವರು ಬೋಸ್ ಅವರು ಅದೇ ಮಾದರಿಯಲ್ಲಿ ತಾಲೂಕಿನ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಈ ಭಾಗದ ಪಂಚಾಯಿತಿಯಲ್ಲಿ ಅತ್ಯಂತ ಮತಗಳನ್ನು ಕೊಡಿಸಬೇಕು ಎಂದರು.
ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಎಚ್.ಡಿ.ನರಸಿಂಹಮೂರ್ತಿ, ಮರಿದೇವಯ್ಯ, ಜಿನ್ನಹಳ್ಳಿ ರಾಜನಾಯಕ, ಶಂಕರೇಗೌಡ, ಕೃಷ್ಣೇಗೌಡ, ಶಿವಯ್ಯ, ಜಯಪ್ರಕಾಶ್, ಶಿವಮ್ಮ, ಗಂಗಾಧರ್, ಸಿದ್ದರಾಮೇಗೌಡ, ಯುವ ಮುಖಂಡ ಯೂಸುಫ್, ಸನಾವುಲ್ಲಾ ಅಬ್ದುಲ್ ಅಜೀಜ್, ಮೊಹಮ್ಮದ್, ಮಹದೇವ್, ಉಮೇಶ್ ಮನಸಿರಿ, ಹೈರಿಗೆ ಮಂಜು ಭಾಗವಹಿಸಿದ್ದರು.