ಪ್ರತಿನಿಧಿ ವರದಿ ತಿ. ನರಸೀಪುರ
ಸಮಾಜದ ಒಳಿತು ಮತ್ತು ಜನ ಜೀವನಕ್ಕೆ ಸಹಕಾರಿಯಾಗುವ ಮೌಲ್ಯಗಳನ್ನು ನೀಡಿರುವುದರಿಂದ ಮಹನೀಯರ ಹುಟ್ಟುಹಬ್ಬ ಮತ್ತು ಅವರ ಸ್ಮರಣೆಯನ್ನು ಮಾಡುತ್ತಿದ್ದೇವೆ ಎಂದು ತಹಸೀಲ್ದಾರ್ ಟಿ. ಜಿ. ಸುರೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಒಕ್ಕಲಿಗರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಮತ್ತು ಬೆಂಗಳೂರು ನಿರ್ಮಾತೃ ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹನೀಯರನ್ನು ಏಕೆ ನೆನಪಿಸಿಕೊಳ್ಳಬೇಕು ಎಂಬ ಎಲ್ಲರಲ್ಲೂ ಜಿಜ್ಞಾಸೆ ಎಲ್ಲರಲ್ಲೂ ಮೂಡುತ್ತದೆ. ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ ಮಹನೀಯರ ಹುಟ್ಟುಹಬ್ಬಗಳ ಆಚರಣೆ ಮಾಡಲಾಗುತ್ತದೆ. ಆ ಮೂಲಕ ಸಮಾಜದಲ್ಲಿ ಮಹನೀಯರು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ ಎಂದು ತಿಳಿಯಬೇಕಾಗುತ್ತದೆ ಎಂದರು.
ಕೆಂಪೇಗೌಡ ದೂರದೃಷ್ಠಿ ಅನನ್ಯ. 16ನೇ ಶತಮಾನದಲ್ಲೇ ಬೆಂಗಳೂರು ನಿರ್ಮಿಸಿ ಕೆರೆ ಕಟ್ಟೆ, ಮಾರುಕಟ್ಟೆ, ಹೆಬ್ಬಾಗಿಲು ಮತ್ತು ಪರಿಸರ ಸಮತೋಲನಕ್ಕಾಗಿ ಗಿಡ ಮರಗಳನ್ನು ವಿಪುಲವಾಗಿ ಬೆಳೆಸಿದ್ದರು. ವ್ಯಕ್ತಿಯಲ್ಲಿ ಸಾಕಷ್ಟು ಪ್ರತಿಭೆಗಳಿರುತ್ತವೆ. ಆದರೆ ಅವುಗಳಲ್ಲಿ ಸಮಾಜಮುಖಿ ತುಡಿತ ಇದ್ದಾಗ ಅಂತಹ ವ್ಯಕ್ತಿ ಅತ್ಯಂತ ಪ್ರಸಿದ್ದಿಯಾಗುತ್ತಾನೆ. ನಾವು ಅಂತಹ ಮಹನೀಯರ ಮೌಲ್ಯಗಳನ್ನು ಅರಿತು ಅದೇ ಪಥದಲ್ಲಿ ಸಾಗುವ ಪ್ರತಿಜ್ಞೆ ಮಾಡೋಣ ಎಂದರು.
ಹಿರಿಯ ವಕೀಲ ದೊಡ್ಡಲಿಂಗೇಗೌಡ ಮಾತನಾಡಿ, ಬೆಂಗಳೂರು ಇಂದು ಜಗತ್ತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರನ್ನು ಪ್ರಪಂಚದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪಿಸುವ ದೂರದೃಷ್ಟಿಯ ಪರಿಕಲ್ಪನೆಯನ್ನು ಕೆಂಪೇಗೌಡ ಅವರು ಹೊಂದಿದ್ದರು. ಹಾಗಾಗಿ ನಗರ ನಿರ್ಮಾಣಕ್ಕೆ ಅವಶ್ಯವಾದ ಎಲ್ಲವನ್ನು ಬೆಂಗಳೂರು ನಗರದಲ್ಲಿ ನಿರ್ಮಿಸಿದ್ದರು. ಅವರು ಸರ್ವಜನಾಂಗದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದರು ಎಂದು ಶ್ಲಾಘಿಸಿದರು .
ಮುಖ್ಯ ಭಾಷಣಕಾರ ಶಿಕ್ಷಕ ರಮೇಶ್ ಮಾತನಾಡಿ, ಮಹನೀಯರು ಸಮಾಜಕ್ಕೆ ಮಾಡಿದ ಸತ್ಕಾರ್ಯಗಳ ಸ್ಮರಣೆಗಾಗಿ ಜಯಂತಿಗಳನ್ನು ಆಚರಿಸುತ್ತಿದ್ದೇವೆ ಎಂದು ಜನ್ಮದಿನದ ಔಚಿತ್ಯವನ್ನು ತಿಳಿಸಿದರು.ಅತ್ಯಂತ ಧೈರ್ಯಶಾಲಿಯಾಗಿದ್ದು, ಬೆಂಗಳೂರಿನಲ್ಲಿ ಸಮಸಮಾಜ ನಿರ್ಮಾಣದ ದೂರದೃಷ್ಟಿ ಹೊಂದಿದ್ದರು ಎಂದರು.
ಸಂದರ್ಭದಲ್ಲಿ ತಾ.ಪಂ. ಯೋಜನಾಧಿಕಾರಿ ಜಯಂತಿ, ಬಿಇಒ ಜಿ. ಶೋಭಾ, ಪಿಡಬ್ಲ್ಯೂಡಿ ಎಇಇ ಸತೀಶ್ ಚಂದ್ರನ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತ, ಕೃಷಿ ಇಲಾಖೆಯ ಎಡಿ ಯಶಶ್ವಿನಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ, ಸಿಡಿಪಿಒ ಗೋವಿಂದರಾಜು, ನೀರಾವರಿ ಇಲಾಖೆಯ ಎಇಇ ಚೆಂಗಪ್ಪ, ಆ ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕ ಪಂಚಲಿಂಗಪ್ಪ, ಗ್ರೇಡ್ -2 ತಹಸೀಲ್ದಾರ್ ರಾಜಕಾಂತ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಿವಶಂಕಮೂರ್ತಿ, ಪುರಸಭೆ ಮುಖ್ಯಾಧಿಕಾರಿಗಳಾದ ವಸಂತಕುಮಾರಿ, ಹೇಮಂತ್ ರಾಜ್, ತಾಲೂಕು ಅರೋಗ್ಯಧಿಕಾರಿ ಡಾ. ರವಿಕುಮಾರ್,
ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಚೆಲುವರಾಜ್, ರಾಜೇಶ್, ಆರ್. ಐ. ಮಹೇಂದ್ರ, ಬಿಸಿಯೂಟ ಸಹಾಯಕ ನಿರ್ದೇಶಕ ಮದ್ದಾನಪ್ಪ, ಸಮುದಾಯದ ಮುಖಂಡರರಾದ ಯಾಚೇನಹಳ್ಳಿ ರಾಮಸ್ವಾಮಿ,ಬನ್ನೂರು ನಾರಾಯಣ್, ರಮೇಶ್ ಮುದ್ದೇಗೌಡ,ಸಮಾಜ ಸೇವಕ ಮಣಿಕಂಠ ರಾಜ್ ಗೌಡ , ಡಾ. ಮಲ್ಲಿಕಾರ್ಜುನಸ್ವಾಮಿ, ಗುರುಪ್ರಸಾದ್, ರಾಮಚಂದ್ರ, ಶಿಕ್ಷಕ ತಲಕಾಡು ನಾಗೇಂದ್ರ, ರೈತ ಮುಖಂಡ ಬನ್ನೂರು ನಾರಾಯಣ್, ರಾಜೂಗೌಡ, , ತಾಲೂಕು ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ ಇತರರು ಹಾಜರಿದ್ದರು.