ಗುಂಡ್ಲುಪೇಟೆ : ‘ಟಣ್ ಟಣ್ ಟಣ್ ಕೇಳಿ ಗಂಟೆ ಧ್ವನಿ ಶಾಲೆಯು ಕರೆಯುತ್ತಿದೆ ಬನ್ನಿ ಕ್ಷಣ ಕ್ಷಣ ಬೆಳಕು ಸಿಕ್ಕರೆ ತಾರೆಯಾಗಿ ಮಿನುಗುತ್ತಿಯೇ ನೀನು..‘
ತಾಲೂಕಿನ ಶಾಲೆಗಳು ಬುಧವಾರ ಬೆಳಗ್ಗೆ ಕೇಳಿ ಬಂದ ಹಾಡಿನ ಸಾಲುಗಳಿವು ಶೈಕ್ಷಣಿಕ ವರ್ಷದ ಆರಂಭಕ್ಕೆ ಶಾಲೆಗಳು ಸಿಂಗಾರಗೊಂಡು ಮಿನುಗ ತೊಡಗಿದವು . ಎಲ್ಲೆಡೆಯೂ ಗುಲಾಬಿ ಹೂವಿನ ಸ್ವಾಗತ ಸಿಹಿ ಅಡುಗೆಯ ಗಮಗಮದೊಂದಿಗೆ ಬೇಸಿಗೆ ರಜೆಯ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಯ ಹೆಜ್ಜೆ ಹಾಕಿದ ಚಿನ್ನರಿಗೆ ಪಟ್ಟಣದ ಮದ್ದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರು ಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಸ್ವಾಮಿ ಹೃದಯಸ್ಪರ್ಶಿ ಸ್ವಾಗತ ನೀಡಿದರು.
ದೀರ್ಘವಾದ ಬೇಸಿಗೆ ರಜೆಯನ್ನು ಮುಗಿಸಿ ಶಾಲೆಯತ್ತ ಬಂದ ಚಿನ್ನರು ತಮ್ಮ ಸ್ನೇಹಿತರನ್ನು ಕಂಡು ಹರ್ಷದಿಂದ ನಲಿದಾಡಿದರು. ರಜೆಯಲ್ಲಿ ಕಳೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಹೊಸ ತರಗತಿಗೆ ತೆರಳಿದರು. ಶಾಲೆಯನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಮೊದಲ ದಿನವಾದ ಕಾರಣ ಪಾಠ ಪ್ರವಚನಕ್ಕೆ ಶಿಕ್ಷಕರು ಆದ್ಯತೆ ನೀಡಲಿಲ್ಲ ಬದಲಿಗೆ ವಿದ್ಯಾರ್ಥಿಗಳ ಯೋಗ ಕ್ಷೇಮ ರಜೆ ದಿನಗಳನ್ನು ಹೇಗೆ ಕಳೆದರೂ ಯಾವ ಊರಿಗೆ ಹೋಗಿದ್ದರು ರಜೆ ದಿನದಲ್ಲಿ ವಿಶೇಷ ಏನಿತ್ತು ಎಂಬುದನ್ನ ಮಕ್ಕಳಿಂದ ಕೇಳಿ ತಿಳಿದುಕೊಂಡರು.
ಗಮನ ಸೆಳೆದ ಸೆಲ್ಫಿ ಕಾರ್ನರ್ : ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯಲ್ಲಿ ಶಾಲೆ ಪ್ರಾರಂಭವಾದ ಮೊದಲ ದಿನವಾದ್ದರಿಂದ ಸಿಂಗರಿಸಲಾಗಿತ್ತು .ಅಲ್ಲದೆ ಸೆಲ್ಫಿ ಕಾರ್ನರ್ ನಿರ್ಮಿಸಲಾಗಿತ್ತು ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಬಂದ ಪೋಷಕರುಗಳು ಸೆಲ್ಫಿ ಕಾರ್ನರ್ ನಲ್ಲಿ ಮಕ್ಕಳೊಂದಿಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮದ್ದಾನೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಸಿ. ಸ್ವಾಮಿ, ಮುಖ್ಯ ಶಿಕ್ಷಕ.ಎಮ್. ಪ್ರಕಾಶ್, ಸೋಮಶೇಖರ್ ಮಹೇಶಪ್ಪ ಮೋಹನ್, ವಿಶ್ವನಾಥ್ ಕೆಎಸ್ ಭಾರದ್ವಾಜ್,ರಾಜೇಶ್, ಅನಿಲ್ ಕುಮಾರ್, ಮಲ್ಲೇಶ್, ಸೌಮ್ಯ, ಮಹಾಲಕ್ಷ್ಮಿ, ಶಿಲ್ಪ, ಪೂರ್ಣಿಮಾ, ನಾಗವೇಣಿ, ಗೋವಿಂದರಾಜು, ದೈಹಿಕ ಶಿಕ್ಷಕ. ಸ್ವಾಮಿ, ಮಂಜುಳಾ, ನಂದೀಶ್, ಮನು, ಮದುಕಿರಣ್, ಮುಂತಾದವರು ಹಾಜರಿದ್ದರು.
ಫೋಟೋ ಇದೆ