- ಕಾವೇರಿ ಪೊಮ್ಮಕ್ಕಡ ಕೂಟ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ ಅಭಿಪ್ರಾಯ
ಪ್ರತಿನಧಿ ವರದಿ ಗೋಣಿಕೊಪ್ಪ
ಕಾವೇರಿ ಪೊಮ್ಮಕ್ಕಡ ಕೂಟ ಹಾಗೂ ಪೊನ್ನಂಪೇಟೆ ಗ್ರಾಪಂ ಸಹಯೋಗದಲ್ಲಿ 150ಕ್ಕೂ ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
ಕಾವೇರಿ ಪೊಮ್ಮಕ್ಕಡ ಕೂಟ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ ಮಾತನಾಡಿ, ಸತತ 4 ವರ್ಷಗಳಿಂದ ಗಿಡ ನೆಡುವ ಕಾರ್ಯ ನಡೆಸಲಾಗುತ್ತಿದೆ. ಪ್ರತಿಯೊಬ್ಬರು ವೈಯಕ್ತಿಕ ಆಚರಣೆ ಸಂದರ್ಭ ಗಿಡ ನೆಡುವ ಕಾರ್ಯ ಪರಿಸರಕ್ಕೆ ಲಾಭ ತರಲಿದೆ. ಬಹುತೇಕ ನಗರೀಕರಣದಿಂದ ಗಿಡ, ಮರಗಳು ನಾಶವಾಗುತ್ತಿದೆ. ದಕ್ಷಿಣ ಕೊಡಗಿನ ಪಟ್ಟಣ ಭಾಗಕ್ಕೆ ಸೇರುವಾಗ ಹೆಚ್ಚು ತಾಪಮಾನ ಎದುರಿಸುತ್ತಿದ್ದೇವೆ. ಇದಕ್ಕೆ ಮರ ನಾಶವೇ ಕಾರಣವಾಗಿದೆ. ಆಯುರ್ವೇದಿಕ್, ಹೊಂಗೆ ಮರಗಳನ್ನು ನೆಡಲು ಸ್ಥಳೀಯ ಆಡಳಿತ ಯೋಜನೆ ರೂಪಿಸಬೇಕಿದೆ. ಜಪಾನ್ನಲ್ಲಿ ಅಕಿರ ಮುಯಾವ್ ವಾಕಿ ಎಂಬುವವರು ಗಿಡಗಳನ್ನು ಗುಂಪು ಗುಂಪಾಗಿ ನೆಡಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದು, ಇಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ ಆವರಣ ಮತ್ತು ಐಟಿಐ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು.
ಪೊಮ್ಮಕ್ಕಡ ಕೂಟದ ಸದಸ್ಯರು ನೆಟ್ಟರು. ಸಂಪಿಗೆ, ನೇರಳೆ, ಜಂಬುನೇರಳೆ, ಸೀಬೆ, ಔಷದೀಯ ಗುಣಗಳುಳ್ಳ ಗಿಡಗಳನ್ನು ನೆಡಲಾಯಿತು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಿಡಿಒ ಪುಟ್ಟರಾಜು ಮಾತನಾಡಿ, ಸಂಘಟನೆಗಳ ಸಹಕಾರದಲ್ಲಿ ಗಿಡ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಮಹಾತ್ಮ ಗಾಂಧಿ ಪ್ರತಿಮೆಗೆ ಪುರ್ಷ್ಪಾನೆ ಸಲ್ಲಿಸಲಾಯಿತು. ಕೂಟದ ಕಾರ್ಯದರ್ಶಿ ಮುಕ್ಕಾಟೀರ ಬೀನಾ ಪ್ರಸನ್ನ, ಖಜಾಂಚಿ ಪರದಂಡ ಸುಮಿ, ಕಮಿಟಿ ಸದಸ್ಯರಾದ ಆಪಟ್ಟೀರ ಸೌಮ್ಯ ಮೊಣ್ಣಪ್ಪ, ಬಲ್ಯಮೀದೇರಿರ ಆಶಾ ಶಂಕರ್, ಸಣ್ಣುವಂಡ ಡಯನಾ ವಿನಯ್, ಮಲ್ಲೇಂಗಡ ಮಮತ ,ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್ ಇದ್ದರು.
——————
ಕೋರ್ಟ್
ಗಿಡ ನೆಟ್ಟು ಪೋಷಿಸುವ ಕಾರ್ಯ ಕೂಡ ಮುಖ್ಯ. ಮುಂದಿನ ಪೀಳಿಗೆಗೆ ಪರಿಸರ ಅರ್ಪಣೆ ಮಾಡಲು ಪರಿಸರ ಸಂರಕ್ಷಣೆ ಅಗತ್ಯ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದ ಗಿಡ ಪೋಷಣೆಗೆ ಒತ್ತು ನೀಡಬೇಕು. ಇದರಿಂದ ಪರಿಸರ ಬಗ್ಗೆ ಜಾಗೃತಿ ಮುಡಿಸಿದಂತಗೂತದೆ. -ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಎಂಎಲ್ ಸಿ
ಫೋಟೋ 25 ಜಿಕೆಪಿ 01 ; ಪೊನ್ನಂಪೇಟೆಯಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದಿಂದ ಗಿಡ ನೆಡಲಾಯಿತು.