ಪ್ರತಿನಿಧಿ ವರದಿ ಚಿಕ್ಕಮಗಳೂರು
ನಗರದಲ್ಲಿ ಮಂಗಳವಾರ ಕುಡಿದ ಮತ್ತಿನಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲಿ ಚಾಕು ಹಿಡಿದು ರಂಪಾಟ ಮಾಡಿದ್ದು, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾರೆ.
ಬೇಲೂರು ರಸ್ತೆಯ ರೈಲ್ವೆ ನಿಲ್ದಾಣಕ್ಕೆ ತರಳುವ ರಸ್ತೆ ಬದಿಯ ಪೆಟ್ರೋಲ್ ಬಂಕ್ ಸಮೀಪ ಸಗಣಿಪುರ ಗ್ರಾಮದ ಕೌಶಿಕ್ ಎಂಬಾತ ಮಧ್ಯಾಹ್ನವೆ ಕಂಠಪೂರ್ತಿ ಕುಡಿದಿದ್ದಾನೆ. ಆನಂತರ ಸುರಿಯುತ್ತಿರುವ ಮಳೆಯಲ್ಲಿಯೆ ಕೈತ್ಯಲ್ಲಿ ಚಾಕು ಹಿಡಿದು ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡ ಹಾಕಿ ಬೆದರಿಸಿದ್ದಾನೆ. ಅಲ್ಲದೆ ರಸ್ತೆ ಬದಿ ನಡೆದು ಹೋಗುತ್ತಿದ ಕೆಲವರಿಗೆ ಚಾಕು ತೋರಿಸಿ ರಂಪಾಟ ಮಾಡಿದ್ದು ಸಮೀಪದ ಗ್ಯಾರೆಜ್ ಒಂದಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿ ಜತೆ ರಂಪಾಟ ಮಾಡಿದ್ದಾನೆ.
ಈ ವೇಳೆ ಸ್ಥಳಿಯರು ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಹೈವೆ ಪೊಲೀಸರು ಆಗಮಿಸಿ ಈತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದರೆ. ಮತ್ತಷ್ಟು ರಂಪಾಟ ಮಾಡಿದ ಕೌಶಿಕ್ ಪೊಲೀಸ್ ಪೇದೆಯೊಬ್ಬರ ಮೇಲೆ ಚಾಕ್ ಬೀಸಿ ಹಲ್ಲೆಗೆ ಮುಂದಾಗಿದ್ದಾನೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಎಳೆದು ಕಾರಿಗೆ ಕೂರಿಸಿದ್ದಾರೆ. ಪೊಲೀಸರು ಎಳೆದೊಯ್ಯುವಾಗ ಕೂಡ ಈತ ಸಿಗರೇಟ್ ಹಚ್ಚಿಕೊಂಡು ದರ್ಪ ತೋರಿಸಿದ್ದಾನೆ. ಈತನ ವರ್ತನೆಯಿಂದ ಕೆಲ ಕಾಲ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಈತನ ಮೇಲೆ ಈಗಾಗಲೆ ರೌಡಿ ಶೀಟರ್ ಪ್ರಕರಣ ದಾಖಲಿಸಲಾಗಿದರು ಕೂಡ ರಸ್ತೆ ಮಧ್ಯೆ ಪೊಲೀಸರ ಭಯವಿಲ್ಲದೆ ರಂಪಾಟ ನಡೆಸಿದ್ದಾನೆ.