ಪ್ರತಿನಿಧಿ ವರದಿ ಸರಗೂರು
ಸರಗೂರು ಪಟ್ಟಣದ ಸೋಮೇಶ್ವರ ದೇವಸ್ಥಾನದ ಮೈದಾನದಲ್ಲಿ ಸರಗೂರು ಮತ್ತು ಕಂದಲಿಕೆ ಹೋಬಳಿಗಳ ಒಕ್ಕೂಟದ ಸಭೆಯನ್ನು ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಮಾಜಿ ಅಧ್ಯಕ್ಷ ಶ್ರೀಮತಿ ಮಲ್ಲಿಗಮ್ಮ ಮಾತಾನಾಡಿ, ಒಕ್ಕೂಟವನ್ನು ಪ್ರತಿಯೊಂದು ಹಳ್ಳಿಯಲ್ಲಿಯೂ ಕಟ್ಟಬೇಕು ಮತ್ತು ಪ್ರತಿ ಹಳ್ಳಿ ಮಟ್ಟದಲ್ಲಿ ಸ್ವ ಸಹಾಯ ಗುಂಪುಗಳನ್ನು ಕಟ್ಟಿ ಅವರ ಜೀವನ ಸುಧಾರಣೆ ಮಾಡಲು ಉಳಿತಾಯ ಮಾಡಿಸಿ. ಬ್ಯಾಂಕ್ ನಲ್ಲಿ ಖಾತೆ ತೆರೆದು ಸಾಲಸೌಲಭ್ಯ ಪಡೆದು ಬಡತನದಿಂದ ಮೇಲೆ ಬರಬೇಕಾಗಿದೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ಮಹಾದೇವ ಮಾತಾನಾಡಿ, ಹಳ್ಳಿ ಹಳ್ಳಿಗಳಲ್ಲಿ ಜೀತ ಮುಕ್ತರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರನ್ನ ಸೇರಿಸಿ ಸಂಘಟನೆ ಮಾಡಿ ಸಣ್ಣ-ಸಣ್ಣ ಗುಂಪುಗಳನ್ನು ಮಾಡಿ ಅವರ ದೈನಂದಿನ ಸಮಸ್ಯೆಗಳು ಮತ್ತು ಅವರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ತಾರತಮ್ಯವನ್ನು ಒಟ್ಟಾಗಿ ಎದುರಿಸಬೇಕು ಎಂದರು.
ಸಂಚಾಲಕ ಶಿವರಾಜ್ ಮಟಕೆರೆ ಮಾತನಾಡಿ, ನಮ್ಮ ಒಕ್ಕೂಟದ ಮುಖಂಡರು ಸ್ವತಂತ್ರವಾಗಿ ನಿಮ್ಮ ನೇತೃತ್ವದಲ್ಲಿ ಸಂಘಟನೆಯನ್ನು ಮುನ್ನಡೆಸಬೇಕು. ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸದಸ್ಯರಿಗೆ ಸಿಗುವ ಸವಲತ್ತುಗಳನ್ನು ಕೊಡಿಸಬೇಕು. ಹೆಚ್ಚು ಹೆಚ್ಚು ಮುಖಂಡರನ್ನು ಬೆಳೆಸಿ ಒಕ್ಕೂಟವನ್ನು ಸಧೃಡವಾಗಿ ಕಟ್ಟಬೇಕು ಎಂದು ಮನವರಿಕೆ ಮಾಡಿದರು.
ಮುಖಂಡರಾದ ಶ್ರೀನಿವಾಸ್, ಸಿಂಗಯ್ಯ, ನಾಗಯ್ಯ, ಬಸವರಾಜ್, ಸಣ್ಣದುರ್ಗಯ್ಯ, ನಟರಾಜ್ ಇದ್ದರು.