ಜಾಹೀರಾತು ವಿಭಾಗದ ಸುದ್ದಿ ಕಡ್ಡಾಯವಾಗಿ ಬಳಸಿ
– ಸಿಗ್ಮಾ ಆಸ್ಪತ್ರೆಯಿಂದ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ
– ಆಶಾಕಿರಣ ಟ್ರಸ್ಟ್ನ ಛೇರ್ಮನ್ ಡಾ.ಎಸ್.ಎನ್. ಮೋತಿ
ಪ್ರತಿನಿಧಿ ವರದಿ ಮೈಸೂರು
ಸಮಯಕ್ಕೆ ಸರಿಯಾಗಿ ಕಿಡ್ನಿ ಸಂಬಂಧಿತ ತಪಾಸಣೆ, ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಿಡ್ನಿ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಆಶಾಕಿರಣ ಟ್ರಸ್ಟ್ನ ಛೇರ್ಮನ್ ಮತ್ತು ಐಎಪಿ ಅಧ್ಯಕ್ಷ ಡಾ.ಎಸ್.ಎನ್. ಮೋತಿ ಹೇಳಿದರು.
ವಿಶ್ವ ಆರೋಗ್ಯ ದಿನ ಮತ್ತು ವಿಶ್ವ ಕಿಡ್ನಿ ದಿನದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಯಕ್ಕೆ ಸರಿಯಾಗಿ ಕಿಡ್ನಿ ಸಂಬಂಧಿತ ತಪಾಸಣೆ ಪರೀಕ್ಷೆ ಮಾಡಿಸಿಕೊಂಡರೆ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಳ್ಳಬಹುದು. ಡಾ. ಮಾದಪ್ಪ ಅವರು ಮೈಸೂರಿನಲ್ಲಿ ಮೊದಲ ಬಾರಿಗೆ ಕಿಡ್ನಿ ಕಸಿ ಚಿಕಿತ್ಸೆಯನ್ನು ಮಾಡಿದವರು. ಕಳೆದ 32 ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಚಿಕಿತ್ಸೆಗಳನ್ನು ಮಾಡಿಕೊಂಡು ಬಂದಿದ್ದಾರೆ, ಮುಂದೆಯೂ ಕೂಡ ಈ ತರಹದ ಸೇವೆಯನ್ನು ಹೆಚ್ಚು ಮಾಡಲಿ ಎಂದರು.
ನಂತರ ಮಾತನಾಡಿದ ಡಾ.ಕೆ.ಎಂ. ಮಾದಪ್ಪ, ನಾವು ಪ್ರತಿ ವರ್ಷ ಕಿಡ್ನಿ ತಪಾಸಣಾ ಶಿಬಿರವನ್ನು ಮಾಡಿಕೊಂಡು ಬಂದ್ದಿದ್ದೇವೆ. ಇದರಿಂದ ಆರಂಭದಲ್ಲೇ ತಪಾಸಣೆ ಮಾಡಿ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಒದಗಿಸಿದರೆ ಕಿಡ್ನಿ ವೈಫಲ್ಯ ವಾಗುವಂತದ್ದನ್ನು ತಪ್ಪಿಸಬಹುದು. ನಾವು ಸೂಕ್ಷ್ಮ ರಂಧ್ರ ಲ್ಯಾಪ್ರೋಸ್ಕೋಪಿಕ್ ಮೂಲಕ ಶಸ್ತ್ರ ಚಿಕಿತ್ಸೆಗಳನ್ನು ಮಾಡುತಿದ್ದೇವೆ ಈಗ ಅತಿ ಹೆಚ್ಚು ಕಿಡ್ನಿ ಸ್ಟೋನ್ ಆಗುವಂಥದ್ದು, ಡಯಾಲಿಸಿಸ್, ಕಿಡ್ನಿ ಕಸಿ ಚಿಕಿತ್ಸೆಗಳು ಹೆಚ್ಚು ನಮ್ಮ ಆಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆಯಿಂದ ಉಚಿತವಾಗಿ ಮಾಡುತ್ತಿದ್ದೇವೆ. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ, ಈವರೆಗೆ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೇವೆ, ಇದಕ್ಕೆ ಸಹಕರಿಸಿದ ಸಹ ವೈದ್ಯರಿಗೆ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ ಮಾತನಾಡಿ, ನಾವು 2000ನೇ ಸಾಲಿನಿಂದ ಮೈಸೂರ್ ಕಿಡ್ನಿ ಕ್ಲಿನಿಕ್ ನ್ನು ಪ್ರಾರಂಭಿಸಿ ನಂತರ ಸಿಗ್ಮ ಆಸ್ಪತ್ರೆ ಸ್ಥಾಪಿಸಿ ಪ್ರತಿ ವರ್ಷ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ಶಿಬಿರಕ್ಕೆ ಕಾರಣಕರ್ತರು ಡಾ.ಮಾದಪ್ಪ ಅವರ ಶ್ರಮ ಮತ್ತು ಅವರ ತಂಡದಿಂದ ಜನರಿಗೆ ಬೇಕಾಗುವಂತಹ ತಪಾಸಣೆ, ರಕ್ತ ಪರೀಕ್ಷೆಗಳು, ಕಿಡ್ನಿ ಸ್ಕ್ಯಾನಿಂಗ್ ಮಾಡುವಂತದ್ದು ಜನರಿಗೆ ಅನುಕೂಲವಾಗುತ್ತದೆ. ಹೆಚ್ಚು ಜನರು ಇದರ ಉಪಯೋಗ ಪಡೆಯಲಿ ಎಂದರು.
ಕಾರ್ಯಕ್ರಮದಲ್ಲಿ ಸಿಗ್ಮಾ ಆಸ್ಪತ್ರೆಯ ನೆಪ್ರೊಲೊಜಿಸ್ಟ್ ಡಾ. ಅನಿಕೇತ್ ಪ್ರಭಾಕರ್, ಮೂತ್ರ ಶಾಸ್ತ್ರಜ್ಞ ಡಾ.ಕೆ.ಎನ್. ಸೋಮಣ್ಣ, ಆಸ್ಪತ್ರೆ ನಿರ್ದೇಶಕಿ ಡಾ.ರಾಜೇಶ್ವರಿ ಮಾದಪ್ಪ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಎಸ್.ಜ್ಞಾನಶಂಕರ್ ಮುಂತಾದವರು ಹಾಜರಿದ್ದರು.
=================