ಪ್ರತಿನಿಧಿ ವರದಿ ಸಕಲೇಶಪುರ
ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ತಾಲೂಕಿನ್ಯಾದ್ಯಂತ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.
ತಾಲೂಕಿನ ಕೆಲಗಳಲೆ ಗ್ರಾಮದದಲ್ಲಿದ್ದ ಕಿರು ಸೇತುವೆ ಕೊಚ್ಚಿ ಹೊದ ಪರಿಣಾಮ ರೈತರು ತಮ್ಮ ಜಮೀನುಗಳಿಗೆ ತೆರಳಲು ಇದೀಗ ಸಂಕಷ್ಟ ಎದುರಾಗಿದೆ. ಕಿರು ಸೇತುವೆಯಿಂದ ಆಚೆಗೆ ಸುಮಾರು 400 ಎಕರೆ ಗದ್ದೆ, ತೋಟಗಳಿದೆ. ಕೃಷಿ ಚಟುವಟಿಕೆ ನೆಡಸಲು ಸಂಪರ್ಕ ಕಡಿದು ಕೊಂಡಿದೆ. ಕಿರು ಸೇತುವೆ ನಿರ್ಮಾಣದ ವೇಳೆ ತಡೆಗೋಡೆ ನಿರ್ಮಿಸದೆ ಅವೈಜಾನಿಕ ಕಾಮಗಾರಿಯಿಂದ ಸೇತುವೆ ಕುಸಿದು ಹೋಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಶನಿವಾರದಿಂದ ಬಿಡುವು ನೀಡಿದ್ದ ಮಳೆುಯಿಂದ ವ್ಯವಸಾಯ ನಡೆಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಶೀಘ್ರವಾಗಿ ಕಿರು ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.