ಪ್ರತಿನಿಧಿ ವರದಿ ಸರಗೂರು
ತಾಲೂಕಿನ ರವಿರಾಮೇಶ್ವರ ಕ್ಷೇತ್ರದ ಬಳಿ ಕಬ್ಬಿನ ಗದ್ದೆಯಲ್ಲಿ ಹುಲಿಯು ಹಸುವನ್ನು ಹಿಡಿದು ತಿಂದಿದೆ.
ಜಮೀನಿನ ಮಾಲೀಕ ನಿಂಗರಾಜು ಪ್ರತಿ ದಿನದಂತೆ ಹೊಲಕ್ಕೆ ಭೇಟಿ ಕೊಟ್ಟಾಗ, ಹಸುವಿನ ಮಾಂಸ ತಿನ್ನುತ್ತಿದ್ದ ಹುಲಿಯು ನೋಡಿ ಗಾಬರಿಗೊಂಡರು. ಅದರ ಆರ್ಭಟದಿಂದ ತಪ್ಪಿಸಿಕೊಂಡು ಸಂಪೂರ್ಣ ಭಯಭೀತರಾಗಿದ್ದಾರೆ.
ಹುಲಿಯ ಹೆಜ್ಜೆಯ ಗುರುತುಗಳು ಸಹ ಇದೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರು ಬೋನನ್ನು ಇಟ್ಟು ಹುಲಿಯನ್ನು ಸೆರೆ ಹಿಡಿದು, ಕಾಡಿಗೆ ಬಿಡುವುದರ ಮೂಲಕ ದೇವಾಲಯಕ್ಕೆ ಬರುವ ಭಕ್ತರಿಗೆ, ರೈತರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.