ಹಾಸನ: ತಾಲೂಕಿನ ಉದ್ದೂರು ಕೊಪ್ಪಲು ಗ್ರಾಮದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಆಕೆಯ ಪೋಷಕರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.
ಶುಭನಾ (೨೮) ಮೃತೆ. ಚಿಕ್ಕಮಗಳೂರಿನ ಗವೇನಹಳ್ಳಿ ಮೂಲಕ ಆಕೆಯನ್ನು ಮೂರು ವರ್ಷಗಳ ಹಿಂದೆ ಹಾಸನದ ಸುನಿಲ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಈ ನಡುವೆ ಆಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ಆಕೆಯ ಪತಿಯೇ ಕೊಲೆ ಮಾಡಿ ನೇಣು ಬಿಗಿದಂತೆ ಬಿಂಬಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮೃತಳ ತಂದೆ ನಾಗರಾಜು ನೀಡಿದ ದೂರು ಆಧರಿಸಿ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಒಪ್ಪಿಸಲಾಗಿದೆ.
Leave a comment