ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿ ಮನೆಯಿಂದ ನಾಪತ್ತೆಯಾಗಿರುವ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಳಂದೂರು ತಾಲೂಕಿನ ಶಿವಕಳ್ಳಿ ಗ್ರಾಮದ ಅಲೂರೇಗೌಡ ಎಂಬುವರ ಪುತ್ರಿ ಕಾವ್ಯಶ್ರೀ(20) ನಾಪತ್ತೆಯಾದ ಯುವತಿ. ಈಕೆ ಕೊಳ್ಳೇಗಾಲದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದರು. ಅಂತೆಯೆ ಜು.5ರಂದು ಅಂತಿಮ ಪರೀಕ್ಷೆ ಬರೆದು ಮಧ್ಯಾಹ್ನ ಮನೆಗೆ ತೆರಳಿದ್ದು, ತಡರಾತ್ರಿ 12.30 ಗಂಟೆಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾಳೆ.
ಈ ಸಂಬಂಧ ಶನಿವಾರದವರೆಗೆ ಗ್ರಾಮ ಮತ್ತು ತಮ್ಮ ಸಂಬಂಧಿಕರ ಮನೆಯಲ್ಲಿ ಯುವತಿಯನ್ನು ಹುಡುಕಾಡಿದ ಪಾಲಕರು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಕಾವ್ಯಶ್ರೀ ಹುಡುಕಿಕೊಡುವಂತೆ ತಂದೆ ಅಲೂರೇಗೌಡ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.