ಪ್ರತಿನಿಧಿ ವರದಿ ಹೊಸೂರು
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಬೆಂಬಲಿಸಿ ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಅವರ ಕೈ ಬಲಪಡಿಸುವಂತೆ ಚಿತ್ರನಟ ದರ್ಶನ್ ಮತದಾರರಲ್ಲಿ ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಅವರು, ಅಭಿವೃದ್ದಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಜಾರಿಗೆ ತಂದು ಬಡವರ ಪರ ಎಂದು ಸಾಬೀತು ಮಾಡಿದೆ. ಮುಂದೆಯೂ ಸಿದ್ದರಾಮಯ್ಯ ನೇತೃತ್ವದಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಲು ವೆಂಕಟರಮಣೇಗೌಡ ಅವರನ್ನುಆಶೀರ್ವದಿಸಿ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ಜನರ ಆಶೀರ್ವಾದದಿಂದ ಗೆಲುವು ಸಾಧಿಸಿದರೇ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಕೋರಿದರು.
ಹೊಸೂರು ಗ್ರಾಮಕ್ಕೆ ಶಾಸಕ ಡಿ.ರವಿಶಂಕರ್ ಅವರ ಜೊತೆ ಆಗಮಿಸಿದ ದರ್ಶನ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಮುಖಂಡರಾದ ಗಂಧನಹಳ್ಳಿ ವೆಂಕಟೇಶ್, ಚಿಕ್ಕಹನಸೋಗೆ ಪಾಲಕ್ಷ, ದಿಡ್ಡಹಳ್ಳಿ ಬಸವರಾಜು, ಜಯಂತ್, ಡೈರಿ ಮಾದು, ಹಳಿಯೂರು ಪ್ರಭಾಕರ್, ಎಲ್ಐಸಿ ಜಗದೀಶ್, ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ನೂತನ್ ಗೌಡ, ಹೊಸೂರು ಡೈರಿ ಅಧ್ಯಕ್ಷ ಎಚ್.ಜೆ.ರಮೇಶ್, ನಿರ್ದೇಶಕ ಪರುಶುರಾಮ್, ಕಾಂಗ್ರೇಸ್ ಅಧ್ಯಕ್ಷ ಸಚಿನ್ , ಮೀನ್ ರಂಗಸ್ವಾಮಿ, ಸೋಮು, ಟೂಬ್ ಹರೀಶ್, ಸಯದ್ ಸಲೀಂ,ಎರಮನುಗನಹಳ್ಳಿ ಆಸ್ಲಾಂ, ಆರ್.ಆರ್.ಎಸ್.ಚಂದ್ರ, ಐಪಿ ವೆಂಕಟೇಶ್, ಓಂಕಾರ್, ದೊಡ್ಡಕೊಪ್ಪಲು ಡಿ.ಎನ್.ಅಪ್ಪಾಜಿ, ಚಿಕ್ಕಕೊಪ್ಪಲು ನವೀನ, ಯೋಜನಾ ಪ್ರಾಧಿಕಾರದ ನಿರ್ದೇಶಕಿ ಸರಿತಾ ಜವರಪ್ಪ, ಮಹಿಳಾ ಕಾಂಗ್ರೇಸ್ ಮುಖಂಡರಾದ ಉಷಾ ಪ್ರಶನ್ನ ಸೇರಿದಂತೆ ಮತ್ತಿತರರು ಹಾಜರಿದ್ದರು.