- ಮೂಲ ಸೌಲಭ್ಯಗಳಿಲ್ಲದೆ ಜನರು ಕಾಡು ಪ್ರಾಣಿಗಳಂತೆ ವಾಸ ಮಾಡುವ ಪರಿಸ್ಥಿತಿ
- ಅಧಿಕಾರಿಗಳು ಗಮನಹರಿಸಲು ಮನವಿ
ಸುರೇಶ್ ಅಜ್ಜೀಪುರ ಹನೂರು
ಓಡಾಡಲು ಸರಿಯಾದ ರಸ್ತೆಯಿಲ್ಲ, ವರ್ಷದಿಂದ ಕೆಟ್ಟು ನಿಂತಿರುವ ಸೋಲಾರ್ ದೀಪ, ಇರುವುದೊಂದೇ ಬಸ್, ಕುಡಿಯುವ ನೀರಿಗಾಗಿ ಕಳೆದ ವಾರದಿಂದ ಪರದಾಟ, ಕೆಟ್ಟು ನಿಂತಿರುವ ಕೈ ಪಂಪ್ ಇದು ಆಲಂಬಾಡಿ ಗ್ರಾಮದ ಸೋಲಿಗರ ಪೋಡಿನ ವಾಸ್ತವ ಸ್ಥಿತಿ.
ತಾಲೂಕಿನ ಗಡಿ ಗ್ರಾಮ ಪಂಚಾಯಿತಿ ಗೋಪಿನಾಥಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಲಂಬಾಡಿ ಗ್ರಾಮವು ಗಡಿಗ್ರಾಮವಾಗಿದ್ದು ಇಲ್ಲಿ ಸೋಲಿಗ ಸಮುದಾಯದ ಜನರು ಹಾಗೂ ಇತರೆ ಜನಾಂಗದ ಜನರು ಸಹ ಬದುಕುತ್ತಿದ್ದಾರೆ. ಆದರೇ ಮೂಲ ಸೌಲಭ್ಯಗಳಿಲ್ಲದೆ ಜನರು ಕಾಡು ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ.
ಕುಡಿಯುವ ನೀರಿಗಾಗಿ ಪರದಾಟ: ಸೋಲಿಗರ ಹಾಡಿಯಲ್ಲಿ 130 ಕ್ಕು ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಇವರಿಗೆ ಒಂದೇ ಒಂದು ಕೈ ಪಂಪು ಮಾತ್ರ ಇದ್ದು ಅದು ಸಹ ಕೆಟ್ಟು ನಿಂತಿದೆ ಇದರಿಂದ ಅಲ್ಲಿನ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದೂ ಕೈ ಪಂಪ್ ಸರಿಪಡಿಸುವಂತೆ ಸಾಕಷ್ಟು ಬಾರಿಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ ಈಗ ಕುಡಿಯುವ ನೀರಿಲ್ಲದೆ ಅಲ್ಲಿನ ಜನರು ಕೆರೆ ಹಾಗೂ ಹಳ್ಳದ ನೀರನ್ನು ಆಶ್ರಯ ಮಾಡಿಕೊಂಡಿದ್ದಾರೆ. ಹಳ್ಳಕ್ಕೆ ವಾಸ ಮಾಡುವ ಸ್ಥಳದಿಂದ ಕಿಮೀ ಗಟ್ಟೆಲೆ ನಡೆದೆ ತೆರಳಬೇಕು ಜೊತೆಗೆ ತಲೆ ಮೇಲೆ ಅಲ್ಲಿಂದ ನೀರನ್ನು ಹೊತ್ತು ತರಬೇಕು ಆಗಿದ್ದರು ಆ ನೀರನ್ನು ಕುಡಿದರೆ ರೋಗ ರುಜಿನಕ್ಕೆ ತುತ್ತಾಗುವ ಸಂಭವವಿದ್ದು ಚಿಕ್ಕ ಮಕ್ಕಳು ವಯೋ ವೃದ್ಧರು ಇದೆ ನೀರನ್ನು ಕಳೆದ ವಾರದಿಂದ ಕುಡಿಯುತ್ತಿದ್ದೂ ರೋಗಕ್ಕೆ ತುತ್ತಾಗುವ ಸಂಭವವಿದ್ದು ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ರಾಜಮ್ಮ, ವಿಜಯ, ಚಿತ್ರ ಇನ್ನಿತರರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇರುವುದೊಂದೇ ಕೈ ಪಂಪ್: ಸೋಲಿಗರ ಹಾಡಿಯಲ್ಲಿ 130 ಕುಟುಂಬ ವಾಸ ಮಾಡುತ್ತಿದ್ದಾರೆ ಆದರೇ ಒಂದೇ ಒಂದು ಕೈ ಪಂಪ್ ಅಷ್ಟು ಕುಟುಂಬಗಳ ದಾಹ ನೀಗಿಸುತ್ತಿದೆ ಇದೀಗ ಇರುವುದೊಂದು ಕೈ ಪಂಪ್ ಕೆಟ್ಟು ನಿಂತಿದ್ದು ಇದೀಗ ಹಳ್ಳದ ನೀರೇ ಗತಿಯಾಗಿದೆ. ಇದರಿಂದ ಇನ್ನೆರಡು ಬೋರ್ ವೆಲ್ ಕೊರೆಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಸೋಲಾರ್ ದುರಸ್ಥಿಗೊಳಿಸಿ: ಹಾಡಿಯಲ್ಲಿ ಸೋಲಾರ್ ದೀಪ ಬೀದಿಯಲ್ಲೂ ಅಳವಡಿಸಿದ್ದು ಮನೆಗಳಿಗೆ ಅಳವಡಿಸಿದ್ದಾರೆ ಆದರೇ ಸೋಲಾರ್ ದೀಪ ಕೆಟ್ಟು ನಿಂತು ತಿಂಗಳೇ ಕಳೆದರೂ ಸಹ ಇನ್ನು ರೆಡಿ ಮಾಡಿಸುವ ಗೋಜಲಿಗೆ ಹೋಗಿಲ್ಲ ಹಾಗಾಗಿ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಲ್ಲೇ ದಿನದೂಡುತ್ತಿದ್ದಾರೆ ಹಾಗಾಗಿ ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆ ದುರಸ್ಥಿ ಪಡಿಸಿ: ಪ್ರವಾಸಿ ತಾಣ ಹೊಗೇನಕಲ್ ಗ್ರಾಮದಿಂದ ಆಲಂಬಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ರಸ್ತೆಯು ತೀರಾ ಹದಗೆಟ್ಟಿದೆ ಇದರಿಂದ ವಾಹನಗಳು ಸಂಚಾರ ಮಾಡಲು ಸಹ ಆಗುವುದಿಲ್ಲ ಹಾಗಾಗಿ ಮಣ್ಣಿನ ರಸ್ತೆಯನ್ನಾದರೂ ದುರಸ್ಥಿ ಮಾಡಿಕೊಳ್ಳಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ?
————
ಆಲಂಬಾಡಿ ಸೋಲಿಗರ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇದೀಗ ನನ್ನ ಗಮನಕ್ಕೆ ಬಂದಿದ್ದು ತುರ್ತಾಗಿ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿರುತ್ತೇವೆ.
। ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಚಾ.ಜನಗರ
ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಕಾರ ಉಂಟಾಗಿದ್ದು ಇರುವ ಒಂದೇ ಕೈ ಪಂಪ್ ಹಾಳಾಗಿದ್ದು ಸಾಕಷ್ಟು ಬಾರಿ ಮನವಿ ಮಾಡಿದ್ದರು ಸಹ ಪ್ರಯೋಜನವಾಗಿಲ್ಲ.
। ವಿಜಯ, ಗ್ರಾಮಸ್ಥರು ಆಲಂಬಾಡಿ
ಆಲಂಬಾಡಿ ಸೋಲಿಗರ ಹಾಡಿಯಲ್ಲಿರುವ ಕೈ ಪಂಪ್ ಕೆಟ್ಟಿರುವುದು ನನ್ನ ಗಮನಕ್ಕೆ ಇದೀಗ ಬಂದಿದ್ದು ರಿಪೇರಿ ಮಾಡಿಸಲು ಹಾಗೂ ಸೋಲಾರ್ ದುರಸ್ಥಿ ಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ.
। ರಾಜಕುಮಾರ್ ಪಿಡಿಒ ಗೋಪಿನಾಥಮ್ ಗ್ರಾಮ ಪಂಚಾಯಿತಿ
ಪೋಟೋ:
ಚಿತ್ರ : ಆಲಂಬಾಡಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಕೆರೆಯ ನೀರನ್ನು ಕುಡಿಯುತ್ತಿರುವುದು.
ಚಿತ್ರ : ಆಲಂಬಾಡಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಕೈ ಪಂಪ್
ಚಿತ್ರ : ಕೆಟ್ಟು ನಿಂತಿರುವ ಸೋಲಾರ್ ಬೀದಿ ದೀಪ