ಪ್ರತಿನಿಧಿ ವರದಿ ಕೆ.ಆರ್.ನಗರ
ಇತ್ತೀಚಿನ ದಿನಗಳಲ್ಲಿ ಯುವಕರು ಜೀವನ ರೂಪಿಸಿಕೊಳ್ಳಲು ಪಟ್ಟಣದ ಕಡೆ ಮುಖಮಾಡಿದ್ದು ಗ್ರಾಮೀಣ ಪ್ರದೇಶಕ್ಕೆ ವಾಪಸಾಗುತಿಲ್ಲಾ ಆದರೇ ನಮ್ಮ ದೇಶದ ಪರಂಪರೆ, ಸಂಸ್ಕೃತಿ ಹಳ್ಳಿಗಳಲ್ಲಿರುವ ಕೃಷಿಕರಲ್ಲಿ ಮಾತ್ರ ಉಳಿದಿದೆ ಎಂದು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ರವರು ಅಭಿಪ್ರಾಯ ಪಟ್ಟರು.
ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಕಪ್ಪಡಿ ದೇವಸ್ಥಾನ ಟ್ರಸ್ಟ್ ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟ ಇವರ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿ ಮೇಳ ಹಾಗೂ ಕೃಷಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಯವ ಮತ್ತು ಸುಸ್ಥಿರ ಕೃಷಿ ಪದ್ದತಿ, ಜತೆಯಲ್ಲಿ ಹೈನುಗಾರಿಕೆಯಲ್ಲಿ ಅನೇಕರು ಇಂದು ಯಶಸ್ಸುಗಳಿಸಿದ್ದು ಅಂತವರ ಮಾರ್ಗದರ್ಶನ ಎಲ್ಲರಿಗು ಸಿಗಬೇಕಾಗಿದೆ ಎಂದರು.
ಇದೇ ಮೊದಲ ಭಾರಿಗೆ ಇಂತಹ ಕೃಷಿ ಮೇಳ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಿ ರೈತರು ಮತ್ತು ಇಲ್ಲಿಗೆ ಆಗಮಿಸುವ ಭಕ್ತರಿಗೆ ವ್ಯವಸಾಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಕೃಷಿ ಮತ್ತು ಕೃಷಿಕರ ಬಗ್ಗೆ ಇರುವ ನಿರ್ಲಕ್ಷ್ಯ ಭಾವನೆಯನ್ನು ತೆಗೆದು ಹಾಕಿ ರೈತ ಸ್ವಾವಲಂಬನೆ ಸಾಧಿಸಿ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡುವ ಉದ್ದೇಶಿತ ಕಾರ್ಯಕ್ರಮ ಮೊದಲ ಪ್ರಯತ್ನ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಹಲವು ಭಾಗದಿಂದ ಕೃಷಿ ವಿಜ್ಞಾನಿಗಳು, ವಿಚಾರ ವಾದಿಗಳು ಬಂದಿದ್ದು ತಮ್ಮ ಜ್ಞಾನ ಮತ್ತು ವಿಚಾರಧಾರೆಯನ್ನು ಮಂಡಿಸಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ ಮುಂದೆಯೂ ಸಹ ಮಠದ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಏರ್ಪಡಿಸಲಾಗುವುದು. ರಾಚಪ್ಪಾಜಿ ಮತ್ತು ಅಣ್ಣಮ್ಮಾಜಿಯವರುಗಳು ನಾಡಿನ ಜನತೆಗೆ ಸುಖ ಸಂತೋಷ ಆರೋಗ್ಯ ಕರುಣಿಸುವ ಜತೆಗೆ ಉತ್ತಮ ಮಳೆಯಾಗಿ ನಾಡು ಸಮೃದ್ಧಿಯಾಗಲಿ ಎಂದು ಆಶೀಸಿದರು.
ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಖ್ಯಾತ ಸಾವಯವ ತಜ್ಞ ಡಾ.ಕೆ.ಆರ್.ಹುಲುನಾಚೇಗೌಡರಿಂದ ಸುಸ್ಥಿರ ಸಾವಯವ ಕೃಷಿ ಬಗ್ಗೆ ಉಪನ್ಯಾಸ, ದಡದಹಳ್ಳಿ ಇಂದ್ರಪ್ರಸ್ಥದ ಡಾ.ಎ.ಪಿ.ಚಂದ್ರಶೇಖರ್ ರವರಿಂದ ಕೃಷಿ ಪದಾರ್ಥಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ಉಪನ್ಯಾಸ, ಇಲವಾಲದ ತೋಟಗಾರಿಕಾ ಮಹಾವಿದ್ಯಾಲಯ ಕೀಟ ತಜ್ಞ ಡಾ.ರಾಮೇಗೌಡರಿಂದ ಕೀಟ ನಿಯಂತ್ರಣಗಳಿಗೆ ಕಷಾಯಗಳಿಂದ ನಿಯಂತ್ರಣ ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.
ಸುತ್ತೂರು ಕೆ.ವಿ.ಕೆಯ ಡಾ.ರಾಜಣ್ಣರಿಂದ ಭೂಮಿ, ಮಣ್ಣು ಫಲವತ್ತತೆ ಹೆಚ್ಚಿಸುವುದು, ಮಿರ್ಲೆ ಇಂದ್ರಮ್ಮ ಸ್ವಸಹಾಯ ಗುಂಪಿನ ಯಶಸ್ಸಿನ ಹಾದಿ ಕುರಿತು ಅನುಭವ ಹಂಚಿಕೊಂಡರೆ, ಪಿರಿಯಾಪಟ್ಟಣದ ಹಿಟ್ಟನೆ ಹೆಬ್ಬಾಗಿಲಿನ ಕಾಳಪ್ಪ ದೇಸಿ ಬೀಜಗಳ ಮಹತ್ವ. ಹೆಗ್ಗವಾಡಿಪುರ ಶಿವಕುಮಾರಸ್ವಾಮಿ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ತಿಳಿಸಿದರು.
ಗಮನ ಸೆಳೆದ ಎತ್ತಿನ ಗಾಣ:- ಈ ಕೃಷಿ ಮೇಳದಲ್ಲಿ ದೇಶಿ ಸಿರಿ ಉತ್ಪನ್ನಗಳ ಸಂಸ್ಥೆಯ ನವೀನ್ರವರ ಎತ್ತಿನ ಗಾಣದಿಂದ ಆಡುಗೆ ಎಣ್ಣೆ ತೆಗೆಯುವ ಘಟಕದ ಪ್ರಾತ್ಯಕ್ಷಿಕೆ, ದೇಸಿ ಹಸುಗಳು ಹಾಗೂ ಎತ್ತುಗಳ ಪ್ರದರ್ಶನ ನೋಡುಗರು ಕಣ್ತುಂಬಿಕೊಂಡು ಸಂಭ್ರಮಿಸಿದರಲ್ಲದೇ ಸ್ಥಳದಲ್ಲೇ ಗಾಣದಿಂದ ತೆಗೆದ ಎಣ್ಣೆಯನ್ನು ಖರೀದಿಸಿದರು.
ಮೇಳದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಅರಣ್ಯ ಇಲಾಖೆಗಳ ವತಿಯಿಂದ ಮಳಿಗೆಗಳನ್ನು ತೆರೆದು ರೈತರಿಗೆ ಇಲಾಖೆಗಳ ವತಿಯಿಂದ ಸಿಗುವ ಸೌಲಭ್ಯಗಳ ಕುರಿತ ಮಾಹಿತಿಯನ್ನು ಹಂಚಿಕೊಂಡರೇ, ದೇಸಿ ಬೀಜ ಸಂರಕ್ಷಕರು ಗೋ ಉತ್ಪನ್ನಗಳು, ಔಷಧೀಯ ಸಸ್ಯಗಳು, ಕೀಟ ಹಾಗೂ ರೋಗ ನಿಯಂತ್ರಣಗಳಿಗೆ ಕಷಾಯ ತಯಾರಿಕೆಯಂತಹ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಮೂರ್ತಿ, ಪ್ರಗತಿಪರ ರೈತರಾದ ಗೋಪಾ¯ಗೌಡ, ಹೆಬ್ಬಾಳು ಸುಜಯ್, ನವೀನ್, ತಾಲೂಕು ರೈತ ಯುವ ವೇದಿಕೆ ಅಧ್ಯಕ್ಷ ರಾಮ್ಪ್ರಸಾದ್, ಹೆಬ್ಬಾಳು ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಶ್ರೀ ಮಠದ ಸಿಬ್ಬಂದಿಗಳಾದ ಕೆ.ಎಂ.ಲಿಂಗರಾಜು, ಭರತ್ ಇನ್ನಿತರರು ಇದ್ದರು.
22 ಕೆಆರ್ಎನ್-1:- ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳವನ್ನು ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ರವರು ಉದ್ಘಾಟಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ, ಪ್ರಗತಿಪರ ರೈತ ಹೆಬ್ಬಾಳು ಸುಜಯ್ ಇನ್ನಿತರರು ಇದ್ದರು.
22 ಕೆಆರ್ಎನ್-2:- ಕಪ್ಪಡಿ ಕ್ಷೇತ್ರದ ಕೃಷಿ ಮೇಳದಲ್ಲಿ ಅಡುಗೆ ಎಣ್ಣೆ ತೆಗೆಯುವ ಎತ್ತಿನ ಗಾಣದಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರೊಂದಿಗೆ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ರವರು.
22 ಕೆಆರ್ಎನ್-3:- ಕಪ್ಪಡಿ ಕ್ಷೇತ್ರದ ಕೃಷಿ ಮೇಳದಲ್ಲಿ ವಿವಿಧ ದೇಸಿ ತಳಿಯ ಎತ್ತುಗಳ ಪ್ರದರ್ಶನ.
22 ಕೆಆರ್ಎನ್-4:- ಕಪ್ಪಡಿ ಕ್ಷೇತ್ರದ ಕೃಷಿ ಮೇಳದಲಿ ಎತ್ತಿನ ಗಾಣ ಚಲಾಯಿಸಿ ಅಡುಗೆ ಎಣ್ಣೆ ತೆಗೆಯುತ್ತಿರುವ ಮಹಿಳೆಯರು.
22 ಕೆಆರ್ಎನ್-5:- ಕಪ್ಪಡಿ ಕ್ಷೇತ್ರದ ಕೃಷಿ ಮೇಳದಲಿ ರೈತರಿಗೆ ಮಾರ್ಗದರ್ಶನ ನೀಡಲು ವಿವಿಧ ಇಲಾಖೆಗಳಿಂದ ತೆರೆದ ಮಳಿಗೆಗಳು.