ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್ ಅಗ್ನಿ ದುರಂತ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, 14 ಜನ ಮೃತ ಆಗಿದ್ದಾರೆ. ಇದು ತುಂಬಾ ಕೆಟ್ಟ ಘಟನೆ. ಒಟ್ಟು 35 ಜನ ಕೆಲಸ ಮಾಡುತ್ತಿದ್ದರು. ಪ್ರಕರಣ ಸಂಬಂಧ ಇಬ್ಬರು ಅರೆಸ್ಟ್ ಆಗಿದ್ದಾರೆ. ಒಟ್ಟು 5 ಜನ ಆರೋಪಿಗಳಿದ್ದಾರೆ. ಒಂದು ವೇಳೆ ಬೆಂಕಿ ಸ್ಪ್ರೆಡ್ ಆಗಿದ್ರೆ ಸಮಸ್ಯೆ ಆಗುತ್ತಿತ್ತು. ಫಾರೆನ್ಸಿಕ್ ಸೈನ್ಸ್ ಮೂಲಕ ಪರಿಶೀಲನೆ ನಡೆಯುತ್ತಿದೆ ಎಂದರು.