ಪ್ರತಿನಿಧಿ ವರದಿ ಚೆಯ್ಯಂಡಾಣೆ
ನರಿಯಂದಡ ಗ್ರಾಮದ ತೋಟಂಬೈಲು ಎಸ್.ಅಪ್ಪಚ್ಚು ಎಂಬುವವರ ಮನೆಯ ಸಮೀಪದ ಬರೆ ಕುಸಿಯುತ್ತಿದ್ದು, ಆತಂಕದಲ್ಲಿ ವೃದ್ಧ ದಂಪತಿ ದಿನ ದೂಡುವಂತಾಗಿದೆ.
ಬರೆಗೆ ತಡೆಗೋಡೆ ನಿರ್ಮಿಸಿಕೊಡುವಂತೆ 2013ರಲ್ಲಿ ಅಂದಿನ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಇನ್ನೂ ಸ್ಪಂದನೆ ದೊರೆತಿಲ್ಲ. ತಡೆಗೋಡೆಯ ಮೇಲಿನ ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಇದರಿಂದ ಬರೆ ಜರಿಯುತ್ತಿರುತ್ತಿದೆ. ಅನಾಹುತ ಎದುರಾಗುವ ಸಾಧ್ಯತೆ ಇರುವುದರಿಂದ ಆತಂಕ ಎದುರಾಗಿದೆ. ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ವೃದ್ಧ ದಂಪತಿ ಮನವಿ ಮಾಡಿದ್ದಾರೆ.
ಫೋಟೋ 1 ಎಂಡಿಕೆ 02: ನರಿಯಂದಡ ಗ್ರಾಮದ ತೋಟಂಬೈಲು ಎಸ್.ಅಪ್ಪಚ್ಚು ಅವರ ಮನೆಯ ಬರೆ ಕುಸಿದಿರುವುದು.