ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧಗಳ ಸಂಖ್ಯೆ ಏರುತ್ತಲೇ ಇದೆ. ಕಳೆದ ತಿಂಗಳಷ್ಟೇ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಹತ್ಯೆ ಮಾಸುವ ಮುನ್ನವೇ, ಇದೀಗ ಹಳೆಯ ದ್ವೇಷಕ್ಕೆ ಸಿಲಿಕಾನ್ ಸಿಟಿಯಲ್ಲಿ ನೆತ್ತರು ಹರಿದಿದೆ.
ಜೊತೆಯಲ್ಲೇ ಕುಳಿತುಕೊಂಡು ಕುಡಿದ ಸ್ನೇಹಿತ, ಹಳೆಯ ದ್ವೇಷಕ್ಕೆ ತನ್ನ ಸ್ನೇಹಿತನ ಉಸಿರು ನಿಲ್ಲಿಸಿದ್ದಾನೆ. ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ಬಾರ್ ನಲ್ಲಿ ನಡೆದಿದ್ದು, ಕಸ್ತೂರಿ ನಗರದ ನಿವಾಸಿ 25 ವರ್ಷದ ಯೋಗೆಂದ್ರ ಸಿಂಗ್ ಕೊಲೆಯಾದ ವ್ಯಕ್ತಿ. 28 ವರ್ಷದ ಉಮೇಶ್ ಕೊಲೆ ಆರೋಪಿಯಾಗಿದ್ದಾನೆ. ಸ್ಯಾಟಲೈಟ್ ನಿಲ್ದಾಣದ ಬಳಿಯ ಕಲಾ ವೈನ್ಸ್ ಬಾರ್ ಒಳಗೆ ಕೊಲೆ ನಡೆದಿದ್ದು., ಘಟನೆಗೆ ಹಳೆಯ ದ್ವೇಷ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಯಲ್ಲೇ ಕುಡಿಯುತ್ತಿದ್ದ ಸ್ನೇಹಿತನಿಂದಲೇ ಘಟನೆ ನಡೆದಿದೆ. ಕೊಲೆ ವೇಳೆ ಬಾರ್ ನಲ್ಲಿದ್ದ ಇತರರು ಕೂಡ ಶಾಕ್ ಆಗಿದ್ದು, ಇಬ್ಬರು ವಿಪರೀತ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಸ್ಥಳೀಯ ಪೊಲೀಸರು ಭೇಟಿ ನೀಡಿ ಘಟನೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ.