ಮೈಸೂರು ಅ.10: ಮಹಿಷ ದಸರಾ ಸಮಿತಿ, ಮಹಿಷ ದಸರಾವನ್ನು ಆಚರಿಸಲು ಮುಂದಾಗಿದ್ದು, ಇದಕ್ಕೆ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಮಹಿಷಾ ದಸರಾ ಕೈಬಿಡಿ ಎಂದು ಚಾಮುಂಡೇಶ್ವರಿ ಭಕ್ತರು 1001 ಮೆಟ್ಟಿಲನ್ನು ಬರಿಗಾಲಿನಲ್ಲಿ ಹತ್ತಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಮತ್ತು ಕರ್ಪೂರ ಹಚ್ಚಿ ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. “ತಾಯಿ ಚಾಮುಂಡೇಶ್ವರಿ ಮಹಿಷಾ ದಸರಾ ಮಾಡುವವರಿಗೆ ಒಳ್ಳೆಯ ಬುದ್ದಿಕೊಡು. ದುಷ್ಟರನ್ನು ಶಿಕ್ಷಿಸಿ, ಶಿಷ್ಠರನ್ನು ರಕ್ಷಿಸು. ಮಹಿಷಾ ದಸರಾ ಮಾಡುತ್ತೇನೆ ಎನ್ನುವ ನಿನ್ನ ಮಕ್ಕಳಿಗೆ ಒಳ್ಳೆಯ ಬುದ್ದಿ ಕೊಡು” ಎಂದು ಪ್ರಾರ್ಥಿಸಿದ್ದಾರೆ.
ನವರಾತ್ರಿಯಲ್ಲಿ ಕಾಳರಾತ್ರಿ ಕೂಡ ಒಂದು. ಅದರಲ್ಲಿ ತಾಯಿ ಚಾಮುಂಡೇಶ್ವರಿ ಅಸುರ ಮಹಿಷನನ್ನು ಸಂಹಾರ ಮಾಡುತ್ತಾಳೆ. ನಂತರ ಬರುವುದೇ ವಿಜಯದಶಮಿ ಇದನ್ನು ಆರ್ಥ ಮಾಡಿಕೊಳ್ಳಿ. ಜಗತ್ತು ಚಾಮುಂಡೇಶ್ವರಿ ತಾಯಿಯನ್ನು ಒಪ್ಪಿಕೊಂಡಿದೆ. ಮಹಿಷಾ ದಸರಾ ಮಾಡುವಂತವರಿಗೆ ಚಾಮುಂಡೇಶ್ವರಿ ಒಳ್ಳೆ ಬುದ್ದಿ ಕೊಟ್ಟು ಆಚರಣೆ ಕೈಬಿಡಲಿ ಎಂದರು.